ಡೆಹ್ರಾಡೂನ್: ನಾವು ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದ್ದು, ಇದೀಗ ಮುಸ್ಲಿ ಮುಕ್ತ ಭಾರತಕ್ಕಿದು ಸಕಾಲ ಬಂದಿದೆ ಎಂದು ವಿಹೆಚ್ ಪಿ ಮುಖಂಡೆ ಸಾಧ್ವಿ ಪ್ರಾಚಿ ಅವರು ಬುಧವಾರ ಹೇಳಿದ್ದಾರೆ.
ಕಳೆದ ವಾರವಷ್ಟೇ ರೂರ್ಕಿಯಲ್ಲಿ ಸಂಭವಿಸಿದ ಕೋಮು ಘರ್ಷಣೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ನಂತರ ಮಾತನಾಡಿರುವ ಅವರು, ಕಾಂಗ್ರೆಸ್ ಮುಕ್ತ ಭಾರತವನ್ನು ಈಗಾಗಲೇ ಕಾರ್ಯಗತಗೊಳಿಸಿದ್ದೇವೆ. ಇದೀಗ ಮುಸ್ಲಿಂ ಮುಕ್ತ ಭಾರತವಾಗಿಸುವ ಸಕಾಲ ಬಂದಿದೆ. ಈ ಕುರಿತಂತೆ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಾಲಿವುಡ್ ನಟ ಶಾರುಖ್ ಹಾಗೂ ಅಮಿರ್ ಖಾನ್ ವಿರುದ್ಧ ಕಿಡಿಕಾರಿರುವ ಅವರು, ಶಾರುಖ್ ಹಾಗೂ ಅಮಿರ್ ಇಬ್ಬರು ಪಾಕಿಸ್ತಾನದ ಪರವಾಗಿದ್ದು, ಅಮಿರ್ ಖಾನ್ ಅವರ ದಂಗಲ್ ಚಿತ್ರವನ್ನು ಹಿಂದೂಗಳು ವಿಫಲವಾಗುವಂತೆ ಮಾಡಬೇಕು. ಶಾರುಖ್ ಖಾನ್ ಅವರು ಕಳೆದ ಎರಡು ಚಿತ್ರಗಳ ಮೂಲಕ ಪಾಠ ಕಲಿತಿದ್ದು, ಇದೀಗ ಹಿಂದೂಗಳನ್ನು ನೆನೆಸಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.
Advertisement