ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆತ್ಮಹತ್ಯೆ ಯತ್ನಕ್ಕೂ ಮುನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ ಟೆಕ್ಕಿ

ಜೀವನದಲ್ಲಿ ತೀವ್ರವಾಗಿ ಬೇಸತ್ತು ಹೋಗಿದ್ದ ಟೆಕ್ಕಿಯೊಬ್ಬ ಆತ್ಮಹತ್ಯೆ ಯತ್ನಕ್ಕೂ ಮುನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ನಂತರ ರಕ್ಷಣೆಗೊಳಗಾಗಿರುವ ಘಟನೆಯೊಂದು ಹರಿಯಾಣ...

ಗುರ್ಗಾಂವ್: ಜೀವನದಲ್ಲಿ ತೀವ್ರವಾಗಿ ಬೇಸತ್ತು ಹೋಗಿದ್ದ ಟೆಕ್ಕಿಯೊಬ್ಬ ಆತ್ಮಹತ್ಯೆ ಯತ್ನಕ್ಕೂ ಮುನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ನಂತರ ರಕ್ಷಣೆಗೊಳಗಾಗಿರುವ ಘಟನೆಯೊಂದು ಹರಿಯಾಣ ರಾಜ್ಯ ಗುರ್ಗಾಂವ್ ನಲ್ಲಿ ಬುಧವಾರ ನಡೆದಿದೆ.

ವರುಣ್ ಮಲಿಕ್ (30) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತಂದೆಯೊಂದಿಗೆ ವಾಸವಿರುವ ಈತ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಕಳೆದ ಹಲವು ದಿನಗಳಿಂದ ಖಿನ್ನತೆಗೊಳಗಾಗಿದ್ದ ಈತ ಇಂದು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ತನ್ನ ಸ್ನೇಹಿತನೊಂದಿಗೆ ಚಾಟ್ ಮಾಡುತ್ತಿದ್ದ.

ಈ ವೇಳೆ ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಹೇಳಿ ಪೋಸ್ಟ ಹಾಕಿದ್ದಾನೆ. ಅಲ್ಲದೆ, ಕೈಯಲ್ಲಿದ್ದ ನರವನ್ನು ಕತ್ತರಿಸಿಕೊಂಡಿರುವುದಾಗಿ ಲ್ಯಾಪ್ ಟಾಪ್ ಮೂಲಕ ತನ್ನ ಸ್ನೇಹಿತನಿಗೆ ತೋರಿಸಿದ್ದಾನೆ. ಇದರಿಂದ ಗಾಬರಿಗೊಂಡಿರುವ ಮಲಿಕ್ ಸ್ನೇಹಿತ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಎಚ್ಚೆತ್ತುಕೊಂಡ ಪೊಲೀಸರು ಮಲಿಕ್ ಯಿದ್ದ ಫ್ಲಾಟ್ ಗೆ ತೆರಳಿ ಪ್ರಜ್ಞಾಹೀನನಾಗಿ ಬಿದ್ದಿದ್ದಿ ಮಲಿಕ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಮಲಿಕ್ ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಮಲಿಕ್ ಅವಿವಾಹಿತರಾಗಿದ್ದು, ಈಗಾಗಲ ಆತನಿಗೆ ಪ್ರಜ್ಞೆ ಬಂದಿಲ್ಲ. ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕಾಯುತ್ತಿದ್ದೇವೆ. ಆತ್ಮಹತ್ಯೆ ಯತ್ನದ ಹಿಂದಿರುವ ಕಾರಣ ತಿಳಿಯಲು ಆತನ ಸ್ನೇಹಿತರನ್ನು ಸಂಪರ್ಕಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com