ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಇಲ್ಲಿನ ಅರಣ್ಯ ಪ್ರದೇಶದಲ್ಲಿ ನಡೆದ ಚಕಮಕಿಯಲ್ಲಿ 7 ಮಂದಿ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ.
ಶ್ರೀನಗರದಿಂದ 110 ಕಿಲೋ ಮೀಟರ್ ದೂರದಲ್ಲಿರುವ ಕುಪ್ವಾರ ಜಿಲ್ಲೆಯ ಖುರಾಮಾದ ಅರಣ್ಯ ಪ್ರದೇಶದಲ್ಲಿ 18 ರಾಷ್ಟ್ರೀಯ ರೈಫಲ್ಸ್ ಯೋಧರು ಉಗ್ರಗಾಮಿಗಳ ಜೊತೆ ನಿನ್ನೆ ಬೆಳಗ್ಗೆ ಕದನ ಆರಂಭಿಸಿದರು. ಇದು ಉಗ್ರಗಾಮಿಗಳು ಆಕ್ರಮಿಸಿದ ಪ್ರದೇಶವಾಗಿದೆ. ಅಡಗಿ ಕುಳಿತಿದ್ದ ಉಗ್ರಗಾಮಿಗಳು ಗುಂಡಿನ ದಾಳಿಯಲ್ಲಿ ನಿರತರಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಟ್ಟ ಅರಣ್ಯವಾದ್ದರಿಂದ ಕಳೆದ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಯೋಧರು ಇಂದು ಮತ್ತೆ ಮುಂದುವರಿಸಿದ್ದಾರೆ.
Advertisement