ಕನಯ್ಯಾನಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ನೀಡುತ್ತೇನೆ ಎಂದವನ ಬ್ಯಾಂಕ್ ಬ್ಯಾಲೆನ್ಸ್ ರು. 150!

ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳ ಮುಖಂಡ ಕನಯ್ಯಾ ಕುಮಾರ್ ಅವರಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ಕೊಡುತ್ತೇನೆ...
ಆದರ್ಶ್ ಶರ್ಮಾ ಹಂಚಿದ ಕರಪತ್ರ
ಆದರ್ಶ್ ಶರ್ಮಾ ಹಂಚಿದ ಕರಪತ್ರ
Updated on
ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳ ಮುಖಂಡ ಕನಯ್ಯಾ ಕುಮಾರ್ ಅವರಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ಕೊಡುತ್ತೇನೆ ಎಂದು ಘೋಷಿಸಿದ್ದ ಪೂರ್ವಾಂಚಲ್ ಸೇನಾ ಅಧ್ಯಕ್ಷ ಆದರ್ಶ್ ಶರ್ಮಾ ಅವರ ಬ್ಯಾಂಕ್ ಬ್ಯಾಲೆನ್ಸ್  ಎಷ್ಟು ಗೊತ್ತಾ? ರು. 150 !
ರೋಹಿಣಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಶರ್ಮಾ, ಹಲವಾರು ತಿಂಗಳಿನಿಂದ ಬಾಡಿಗೆಯನ್ನೂ ಪಾವತಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕನಯ್ಯಾ ಅವರನ್ನು ಹತ್ಯೆ ಮಾಡಿದರೆ ಪೂರ್ವಾಂಚಲ್ ಸೇನೆ ವತಿಯಿಂದ ರು. 11 ಲಕ್ಷ ಬಹುಮಾನವನ್ನು ನೀಡಲಾಗುವುದು ಎಂದು ಬರೆದ ಕರಪತ್ರವನ್ನು ಶರ್ಮಾ ಹಂಚಿದ್ದರು. ಈ ರೀತಿ ಕರಪತ್ರ ಹಂಚುದುದಕ್ಕಾಗಿ ಪೊಲೀಸರು ಈತನ ವಿರುದ್ಧ ಕೇಸು ದಾಖಲಿಸಿದ್ದರು.
ಕೇಸು ದಾಖಲಾದ ನಂತರ ಶರ್ಮಾ ತಲೆ ಮರೆಸಿಕೊಂಡಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com