ಮುಂಬೈ: ಭಾರತ-ಪಾಕಿಸ್ತಾನ ಟಿ 20 ಕ್ರಿಕೆಟ್ ಪಂದ್ಯಕ್ಕೆ ಶಿವಸೇನೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದೆ.
ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ, ಪಾಕಿಸ್ತಾನದೊಂದಿಗಿನ ಪಂದ್ಯವನ್ನು ಅಪಾಯಕಾರಿ ಎಂದು ಹೇಳಿದ್ದು, ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಪಂದ್ಯ ಆಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಭದ್ರತೆ ಕಾರಣಗಳಿಂದ ಭಾರತ-ಪಾಕ್ ಪಂದ್ಯವನ್ನು ಧರ್ಮಶಾಲದಿಂದ ಕೋಲ್ಕತಾದ ಈಡನ್ ಗಾರ್ಡನ್ ಗೆ ಸ್ಥಳಾಂತರಿಸಲಾಗಿತ್ತು. ಪಠಾಣ್ ಕೋಟ್ ದಾಳಿ ನಂತರ ಭಾರತ ಪಾಕಿಸ್ತಾನದೊಂದಿಗೆ ಟಿ 20 ಪಂದ್ಯ ಆಡುವುದಕ್ಕೆ ಶಿವಸೇನೆ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
Advertisement