ಬಾಲ್ಯದಿಂದಲೂ ಭಾರತ ಕಂಡರೆ ದ್ವೇಷ, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರನಾದೆ: ಹೆಡ್ಲಿ

ಬಾಲ್ಯದಿಂದಲೂ ಭಾರತವನ್ನು ಕಂಡರೆ ನನಗೆ ದ್ವೇಷ. ಹೀಗಾಗಿ ಭಾರತ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಾನು ಉಗ್ರನಾದೆ. ಇದೇ ಕಾರಣಕ್ಕೆ ಲಷ್ಕರ್-ಇ-ತೊಯ್ಬಾ ಉಗ್ರ...
ಡೇವಿಡ್ ಹೆಡ್ಲಿ
ಡೇವಿಡ್ ಹೆಡ್ಲಿ

ಮುಂಬೈ: ಬಾಲ್ಯದಿಂದಲೂ ಭಾರತವನ್ನು ಕಂಡರೆ ನನಗೆ ದ್ವೇಷ. ಹೀಗಾಗಿ ಭಾರತ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಾನು ಉಗ್ರನಾದೆ. ಇದೇ ಕಾರಣಕ್ಕೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸೇರಿದ್ದೆ ಎಂದು 26/11ರ ಮುಂಬೈ ದಾಳಿಯ ಆರೋಪಿ ಡೇವಿಡ್ ಹೆಡ್ಲಿ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾನೆ.

ಸದ್ಯ ಅಮೆರಿಕ ಜೈಲಿನಲ್ಲಿರುವ ಹೆಡ್ಲಿ 26/11ರ ಮುಂಬೈ ದಾಳಿಯ ಕುರಿತಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಮಾತನಾಡಿದ್ದಾನೆ. ಈ ವೇಳೆ 1971ರಲ್ಲಿ ನಾನು ಓದುತ್ತಿದ್ದ ಶಾಲೆಯ ಮೇಲೆ ಭಾರತೀಯ ಸೇನೆಯ ಹೆಲಿಕಾಫ್ಟರ್ ಗಳು ಬಾಂಬ್ ಹಾಕಿದ್ದವು. ಇದೇ ಕಾರಣಕ್ಕೆ ಬಾಲ್ಯದಿಂದಲೂ ಭಾರತವನ್ನು ದ್ವೇಷಿಸಲು ಶುರುಮಾಡಿದೆ. ಭಾರತಕ್ಕೆ ಹೆಚ್ಚು ಹಾನಿ ಮಾಡಬೇಕು ಎಂದು ಹಾತೊರೆಯುತ್ತಿದ್ದಾಗ ನಾನು ಲಷ್ಕರ್ ಇ ತೊಯ್ಬಾ ಉಗ್ರ ಸೇರಿದೆ ಎಂದು ಹೆಡ್ಲಿ ಹೇಳಿಕೊಂಡಿದ್ದಾನೆ.

ಹೌದು ನಾನೊಬ್ಬ ಅಮಾನವೀಯ, ಅಮಾನುಷ, ಭೀಕರವಾದ ವ್ಯಕ್ತಿ. ನಾನೊಬ್ಬ ದುಷ್ಟ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಅದೇ ಕಾರಣಕ್ಕೆ ಮುಂಬೈ ದಾಳಿ ನಡೆಸಿ ಅಪಾರ ಸಾವು ನೋವಿಗೆ ಕಾರಣನಾದೆ ಎಂದು ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com