ಮುಜಾಫರ್ ನಗರ: ಕೃಷಿ ಭೂಮಿಗೆ ನೀರು ನೀಡುವ ವಿಷಯದಲ್ಲಿ ಅಣ್ಣ-ತಮ್ಮಂದಿರ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮುಜಾಫರ್ ನಗರದಲ್ಲಿ ನಡೆದಿದೆ.
ಹತ್ಯೆಗೀಡಾದ ವ್ಯಕ್ತಿಯ ಮಗ ನೀಡಿರುವ ದೂರಿನ ಪ್ರಕಾರ, ವಿರೇಂದರ್ ಎಂಬುವವರು ತಮ್ಮನ ಕೃಷಿ ಭೂಮಿಗೆ ನೀರು ನೀಡುವುದಕ್ಕೆ ನಿರಾಕರಿಸಿದ್ದರ ಪರಿಣಾಮ ಆತನ ಸಹೋದರ ಉಪೇಂದರ್ ಅಣ್ಣನ ಹತ್ಯೆ ಮಾಡಿದ್ದಾನೆ ಎಂದು ಎಫ್ಐಆರ್ ದಾಖಲಿಸಲಾಗಿದೆ. ಹತ್ಯೆಗೀಡಾದ ವೀರೇಂದರ್ ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಅಪರಾಧಿ ಉಪೇಂದರ್ ನನ್ನು ಬಂಧಿಸಲಾಗಿದೆ.
Advertisement