ಪಂಚರಾಜ್ಯ ಚುನಾವಣೆ: ಶ್ರೀಶಾಂತ್, ಭುಟಿಯಾಗೆ ಸೋಲು, ಗೆದ್ದ ಜಯಾ, ಮಮತಾ, ಕರುಣಾನಿಧಿ
ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಸೇರಿದ್ದ ಕ್ರಿಕೆಟಿಗ ಶ್ರೀಶಾಂತ್ ಹೀನಾಯವಾಗಿ ಸೋತಿದ್ದಾರೆ. ತಿರುವನಂತಪುರಂ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀಶಾಂತ್ ಸುಮಾರು 10 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಯಶಸ್ಸು ಗಳಿಸಿದೆ. ಆದರೆ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಟಿಎಂಸಿ ಪರ ಸ್ಪರ್ಧಿಸಿದ್ದರು. ಸೋಲು ಕಂಡಿದ್ದಾರೆ.
ಇನ್ನು ಕಣದಲ್ಲಿದ್ದ ಪ್ರಭಾವಿ ನಾಯಕರಾದ, ಅಚ್ಯುತಾನಂದನ್, ಜಯಲಲಿತಾ, ಉಮನ್ ಚಾಂಡಿ, ಕರುಣಾನಿಧಿ, ಎಂ.ಕೆ ಸ್ಟಾಲಿನ್, ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದಾರೆ.
ಗೆದ್ದವರು
ಜಯಲಲಿತಾ(ಎಐಎಡಿಎಂಕೆ) ತಮಿಳುನಾಡು
ಉಮನ್ ಚಾಂಡಿ(ಕಾಂಗ್ರೆಸ್) ಕೇರಳ
ಪಿಣರಾಯ್ ವಿಜಯನ್(ಸಿಪಿಐ)
ಅಚ್ಯುತಾನಂದನ್(ಸಿಪಿಎಂ) ಕೇರಳ
ಎಂ.ಕೆ ಸ್ಟಾಲಿನ್(ಡಿಎಂಕೆ) ತಮಿಳುನಾಡು
ಕರುಣಾನಿಧಿ(ಡಿಎಂಕೆ) ತಮಿಳುನಾಡು
ಮಮತಾ ಬ್ಯಾನರ್ಜಿ(ಟಿಎಂಸಿ) ಪಶ್ಚಿಮ ಬಂಗಾಳ
ಸೋತವರು
ಶ್ರೀಶಾಂತ್(ಬಿಜೆಪಿ) ಕೇರಳ
ಭೈಚುಂಗ್ ಭುಟಿಯಾ(ಟಿಎಂಸಿ) ಪಶ್ಚಿಮ ಬಂಗಾಳ