ವರದಕ್ಷಿಣೆಗಾಗಿ ನವವಧುವನ್ನು ಕತ್ತು ಸೀಳಿ ಕೊಂದ ಮಾವ

ವರದಕ್ಷಿಣೆಗಾಗಿ ಮಾವನೊಬ್ಬ ನವವಿವಾಹಿತ ಸೊಸೆಯನ್ನು ಕೊಂದಿರುವ ಘಟನೆ ಮುಜಾಪರ್ ನಗರ ಜಿಲ್ಲೆಯ ಸಿಕ್ರೆದಾ ಎಂಬಲ್ಲಿ ನಡೆದಿದೆ. ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಜಾಫರ್ ನಗರ: ವರದಕ್ಷಿಣೆಗಾಗಿ ಮಾವನೊಬ್ಬ ನವವಿವಾಹಿತ ಸೊಸೆಯನ್ನು ಕೊಂದಿರುವ ಘಟನೆ  ಮುಜಾಪರ್ ನಗರ ಜಿಲ್ಲೆಯ ಸಿಕ್ರೆದಾ ಎಂಬಲ್ಲಿ ನಡೆದಿದೆ.

ಸರಿತಾ ಮೃತ ದುರ್ದೈವಿ, ಶುಕ್ರವಾರದಿಂದ ಸರಿತಾ ನಾಪತ್ತೆಯಾಗಿದ್ದಾಳೆಂದು ಸ್ಥಳೀಯರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸರಿತಾ ಮಾವನನ್ನ ಬಂದಿಸಿದ್ದಾರೆ.

ತಾನು ಆಕೆಯನ್ನು ಕೊಂದು ಶವವನ್ನು ಮೋರಿಯಲ್ಲಿ ಬಿಸಾಡಿದ್ದಾಗಿ ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ. ಸರಿತಾ ಕುತ್ತಿಗೆಯನ್ನು ಸೀಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಏಪ್ರಿಲ್ ನಲ್ಲಿ ಸರಿತಾ ವಿವಾಹವಾಗಿತ್ತು. ಮನೆಯ ಇತರೆ ಸದಸ್ಯರು ನಾಪತ್ತೆಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com