ಅಮರ್ ಸಿಂಗ್
ಅಮರ್ ಸಿಂಗ್

ರಾಮ್ ಗೋಪಾಲ್ ಮೇಲೆ ನೇತಾಜಿಗೆ ನಂಬಿಕೆ ಇದ್ದರೇ, ನಾನೂ ಅವರ ಜೊತೆ ಇರುತ್ತೇನೆ: ಅಮರ್ ಸಿಂಗ್

ಉಚ್ಚಾಟಿತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡಿಸಿಕೊಂಡಿರುವ ಸಂಬಂಧ ಸಂಸದ ಅಮರ್ ...
Published on

ನವದೆಹಲಿ: ಉಚ್ಚಾಟಿತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡಿಸಿಕೊಂಡಿರುವ ಸಂಬಂಧ ಸಂಸದ ಅಮರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ನೇತಾಜಿ ಮುಲಾಯಂ ಸಿಂಗ್ ಯಾದವ್ ಅವರಿಗೆ ರಾಮ್ ಗೋಪಾಲ ಯಾದವ್ ಮೇಲೆ ನಂಬಿಕೆ ಇದ್ದರೆ ನನಗೂ ಇರುತ್ತದೆ ಎಂದು ಹೇಳಿದ್ದಾರೆ. ಅದು ಅವರ ಪಕ್ಷ, ಅವರು ಯಾರನ್ನಾದರೂ ಉಚ್ಚಾಟಿಸಬಹುದು, ಯಾರನ್ನು ಬೇಕಾದರೂ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಷಯ ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

ಅಮರ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಎಸ್ ಪಿ ಪ್ರದಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಹೇಳಿದ್ದರು, ನನ್ನನ್ನು ಉಚ್ಚಾಟಿಸುವಂತಿದ್ದರೇ ಉಚ್ಚಾಟಿಸಲು ನಾನು ಅದಕ್ಕೆ ಸಿದ್ಧನಿದ್ದೇನೆ, ಈ ಮೊದಲು ನನ್ನನ್ನು ಉಚ್ಚಾಟಿಸಲಾಗಿತ್ತು, 2ನೇ ಬಾರಿ ಉಚ್ಚಾಟನೆ ಮಾಡಲಿ, ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಮುಲಾಯಂ ಸಿಂಗ್ ಅವರ ಜೊತೆಗಿರುತ್ತೇನೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com