ಛತ್ತೀಸ್ ಗಢದ ನಾರಾಯಣ್ ಪುರ ಜಿಲ್ಲೆಯಲ್ಲಿ ಎನ್ ಕೌಂಟರ್: ಐವರು ನಕ್ಸಲರು ಹತ

ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯ ಬೆಚ ಅರಣ್ಯ ಪ್ರದೇಶದಲ್ಲಿ ಕಳೆದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನಾರಾಯಣ್ ಪುರ(ಚತ್ತೀಸ್ ಗಢ): ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯ ಬೆಚ ಅರಣ್ಯ ಪ್ರದೇಶದಲ್ಲಿ ಕಳೆದ ರಾತ್ರಿ ಪೊಲೀಸ್ ಎನ್ ಕೌಂಟರ್ ನಲ್ಲಿ ಕನಿಷ್ಠ ಐವರು ನಕ್ಸಲೀಯರು ಹತರಾಗಿದ್ದಾರೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಯಶಸ್ವಿ ಕಾರ್ಯಾಚರಣೆಯಲ್ಲಿ ತುಸ್ಪಾಲ್ ಮತ್ತು ಬೆಚ ಕಿಲಮ್ ಅರಣ್ಯ ಪ್ರದೇಶದಲ್ಲಿ ನಾರಾಯಣಪುರ ಜಿಲ್ಲಾ ಮೀಸಲು ಗುಂಪಿನ ಸಿಪಿಐ ಮಾವೋವಾದಿಗಳ ನಂಬರ್ 6, ಮಿಲಿಟರಿ ಕಂಪೆನಿಯ 6 ಮಂದಿ ಮಾವೋವಾದಿಗಳನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದುಹಾಕಿದ್ದಾರೆ. ಇದುವರೆಗೆ ಐವರು ನಕ್ಸಲೀಯರ ಶವ ದೊರೆತಿದ್ದು ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
 ನಾರಾಯಣ್ ಪುರ ಪೊಲೀಸರು ಮತ್ತು ಕೊಂಡಗೌನ್ ಪೊಲೀಸರ ತಂಡ ಜಂಟಿಯಾಗಿ ಕರ್ಯಾಚರಣೆ ನಡೆಸಿದೆ. ಮಿಷನ್ 2016 ಬಾಸ್ತಾರ್ ನ ಭಾಗವಾಗಿ ಈ ಎನ್ ಕೌಂಟರ್ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com