ಕಳೆದ ವಾರ ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಬೀದಿ ಬದಿಯ ವ್ಯಾಪಾರಿಗಳನ್ನು ಭೇಟಿ ಮಾಡಿ, ಮೋದಿ ಸರ್ಕಾರ ಕರೆನ್ಸಿಗಳನ್ನು ನಿಷೇಧಿಸಿರುವುದರಿಂದ ವ್ಯಾಪಾರ, ವಹಿವಾಟಿಗೆ ತೊಂದರೆಯುಂಟಾಗುತ್ತಿದೆಯೇ ಎಂದು ವಿಚಾರಿಸಲು ಹೋಗಿದ್ದರು. ಆಗ ಅಲ್ಲಿ ಮೋದಿ ಪರವಾದ ಘೋಷಣೆಯನ್ನು ಹಲವರು ಕೂಗುವ ಮೂಲಕ ರಾಹುಲ್ ಗಾಂಧಿಯವರಿಗೆ ಮುಜುಗರವುಂಟಾಗಿತ್ತು.