ಹಿಂದಿನ ಯುಪಿಎ ಸರ್ಕಾರವನ್ನು ಟೀಕಿಸಿದ ಅವರು, ನೋಟುಗಳ ರದ್ದತಿ ಕುರಿತು ಹಿಂದಿನ ಯುಪಿಎ ಸರ್ಕಾರ ಕೂಡ ಪರಿಗಣಿಸಿತ್ತು. ಆದರೆ ಅದನ್ನು ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ, ರಾಜಕೀಯ ಅಧಿಕಾರ ಅವರಲ್ಲಿರಲಿಲ್ಲ. ತಾವೇ ನಿರ್ಧಾರ ತೆಗೆದುಕೊಳ್ಳುವ ನಾಯಕತ್ವ ಅಧಿಕಾರ ಮನಮೋಹನ್ ಸಿಂಗ್ ಅವರಿಗಿರಲಿಲ್ಲ. ಹಣದ ವಹಿವಾಟು ಕುರಿತು ಹೇಳುವುದಾದರೆ, ಅವರ ಸರ್ಕಾರವೇ ಒಂದು ಸಲ ನಗದು ವಿನಿಮಯ ತೆರಿಗೆ ತಂದಿತ್ತು. ಹಾಗಾಗಿ ಪ್ರಸ್ತುತ ಸರ್ಕಾರವನ್ನು ಪ್ರಶ್ನಿಸುವುದು ಮನಮೋಹನ್ ಸಿಂಗ್ ಅವರಿಗೆ ಅಪಾಯದ ರಾಜಕೀಯ ಅವಕಾಶವಾದಿತನ. ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಂತೆ, ಉತ್ತಮ ಆಡಳಿತಗಾರನಂತೆ ಮಾತನಾಡುವುದನ್ನು ನಾವು ನಿರೀಕ್ಷಿಸುತ್ತೇವೆಯೇ ಹೊರತು ರಾಹುಲ್ ಗಾಂಧಿಯಂತೆ ಅಲ್ಲ ಎಂದು ಹೇಳಿದರು.