ನವದೆಹಲಿ: ಮೊನ್ನೆ ಮೊನ್ನೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದ ಕ್ರಿಕೆಟಿಗ ಶಾಹಿದ್ ಅಫ್ರಿದಿ ನರಿಬುದ್ದಿ ತೋರಿದ್ದಾರೆ. ಪಠಾಣರು ಪಾಕಿಸ್ತಾನದ ಗಡಿ ಕಾಯುತ್ತಿದ್ದಾರೆ ಎಂಬುದನ್ನು ಭಾರತ ಮರೆತಂತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್ ಶೋ ವೊಂದರಲ್ಲಿ ಭಾಗವಹಿಸಿದ್ದ ಶಾಹಿದ್ ಆಫ್ರಿದಿಯನ್ನು, ಭಾರತದ ಕೆಲವು ನ್ಯೂಸ್ ಪೋರ್ಟಲ್ಗಳಲ್ಲಿ ಆಫ್ರಿದಿ ಭಾರತೀಯ ಸೇನಾ ಪಡೆಗೆ ಭಯ ಪಡುತ್ತಿದ್ದಾರೆ ಎಂಬುದು ಸುದ್ದಿಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಆಫ್ರಿದಿ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರು ಇರುವ ಕುರಿತು ಭಾರತೀಯರು ಗಮನಿಸಿದಂತಿಲ್ಲ. ಪಾಕ್ ಗಡಿಯನ್ನು ಪಠಾಣರು ಕಾಯುತ್ತಿದ್ದಾರೆ. ಅಲ್ಲದೆ ನಮ್ಮೆಲ್ಲಾ ಗಡಿಗಳು ಪಾಕ್ ಸೇನಾ ಪಡೆಗಳಿಂದ ಸುರಕ್ಷಿತವಾಗಿವೆ' ಎಂದು ಆಫ್ರಿದಿ ಹೇಳಿದ್ದಾರೆ.
ಭಾರತದ ಸರ್ಜಿಕಲ್ ದಾಳಿ ಬಳಿಕ ಸರಣಿ ಟ್ವೀಟ್ ಮಾಡಿದ್ದ ಆಫ್ರಿದಿ, ಏಷ್ಯಾದ ಎರಡು ಬಲಿಷ್ಠ ರಾಷ್ಟ್ರಗಳು ಶಾಂತಿ ಕಾಪಾಡಬೇಕು. ಅಲ್ಲದೆ ಪಾಕ್ ಯಾವಾಗಲೂ ಶಾಂತಿ ಬಯಸುವ ರಾಷ್ಟ್ರ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಶಾಹಿದ್ ಆಫ್ರಿದಿ ಉಲ್ಟಾ ಹೊಡೆದಿದ್ದಾರೆ.
Advertisement