2013 ರಲ್ಲಿ ಕೊಲೆಯಾದ ವಿಚಾರವಾದಿ ನರೇಂದ್ರ ದಭೋಲ್ಕರ್
ದೇಶ
ದಭೋಲ್ಕರ್ ಕೊಲೆ: ವೀರೇಂದ್ರಸಿಂಗ್ ತಾವ್ಡೆ ವಿರುದ್ಧ ಕೊಲೆ ಆರೋಪ ಪ್ರಕರಣ ದಾಖಲಿಸಿದ ಸಿಬಿಐ
2013 ರಲ್ಲಿ ನಡೆದ ವಿಚಾರವಾದಿ ನರೇಂದ್ರ ದಭೋಲ್ಕರ್ ಕೊಲೆ ಸಂಬಂಧವಾಗಿ ಸಿಬಿಐ, ಹಿಂದೂ ಜಾಗರಣ ಸಮಿತಿ ಸದಸ್ಯ ವೀರೇಂದ್ರಸಿಂಗ್ ತಾವ್ಡೆ ವಿರುದ್ಧ ಅಪರಾಧ ಷಡ್ಯಂತ್ರ ಮತ್ತು ಕೊಲೆ ಪ್ರಕರಣ ದಾಖಲಿಸಿದೆ.
ನವದೆಹಲಿ: 2013 ರಲ್ಲಿ ನಡೆದ ವಿಚಾರವಾದಿ ನರೇಂದ್ರ ದಭೋಲ್ಕರ್ ಕೊಲೆ ಸಂಬಂಧವಾಗಿ ಸಿಬಿಐ, ಹಿಂದೂ ಜಾಗರಣ ಸಮಿತಿ ಸದಸ್ಯ ವೀರೇಂದ್ರಸಿಂಗ್ ತಾವ್ಡೆ ವಿರುದ್ಧ ಅಪರಾಧ ಷಡ್ಯಂತ್ರ ಮತ್ತು ಕೊಲೆ ಪ್ರಕರಣ ದಾಖಲಿಸಿದೆ.
ಮತ್ತೊಬ್ಬ ವಿಚಾರವಾದಿ ಮತ್ತು ಬರಹಗಾರ ಗೋವಿಂದ ಪನ್ಸಾರೆ ಅವರು ಫೆಬ್ರವರಿ 2015 ರಲ್ಲಿ ಕೊಲೆಯಾದಾಗಲಿಂದಲೂ ಪರಿವೀಕ್ಷಣೆಯಲ್ಲಿರುವ ಮತ್ತೊಂದು ಹಿಂದೂ ಸಂಸ್ಥೆ ಸನಾತನ ಸಂಸ್ಥಾ ಜೊತೆಗೆ ಹಿಂದೂ ಜಾಗರಣ ಸಮಿತಿಗೆ ಸಂಬಂಧವಿದೆ ಎಂದು ಕೂಡ ತಿಳಿಯಲಾಗಿದೆ.
ಸೆಕ್ಷನ್ 120-ಬಿ (ಅಪರಾಧ ಷಡ್ಯಂತ್ರ) ಮತ್ತು ಸೆಕ್ಷನ್ 302 (ಕೊಲೆ) ಅಡಿಯಲ್ಲಿ ತಾವ್ಡೆ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಮೂಢ ನಂಭಿಕೆ ವಿರೋಧಿ ಕಾರ್ಯಕರ್ತ ದಭೋಲ್ಕರ್ ಅವರನ್ನು ಹಾಡುಹಗಲೇ ಆಗಸ್ಟ್ 20 2103 ರಲ್ಲಿ ಕೊಲ್ಲಲಾಗಿತ್ತು. ಮೇ 2014 ರಲ್ಲಿ ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು ಮತ್ತು ಈ ವರ್ಷ ಜೂನ್ ನಲ್ಲಿ ತಾವ್ಡೆಯನ್ನು ಸಿಬಿಐ ಬಂಧಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ