ನವದೆಹಲಿ: ದೇಶದಾದ್ಯಂತ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶುಭಾಶಯ ಕೋರಿದ್ದಾರೆ.
ಟ್ವಿಟರ್ ನಲ್ಲಿ ಶುಭಾಶಯ ಕೋರಿರುವ ಅವರು, ಭಾರತದ ಇಂಜಿನಿಯರ್ ಕ್ಷೇತ್ರದಲ್ಲಿ ಸರ್ ಎಂ. ವಿಶ್ವೇಶ್ವರಾಯ ಅವರು ಸಲ್ಲಿಸಿರುವ ಆಪಾರ ಕೊಡುಗೆಯ ಸ್ಮರಣೆಗಾಗಿ ಇವರ ಜನ್ಮ ದಿನಾವನ್ನು ಪ್ರತೀ ವರ್ಷ ಸೆಪ್ಟಂಬರ್ 15 ರಂದು ಭಾರತದಲ್ಲಿ ಇಂಜಿನಿಯರ್ಸ್ ಗಳ ದಿನವಾಗಿ ಆಚರಿಸಲಾಗುತ್ತದೆ.
ಇಂಜಿನಿಯರ್ ಗಳ ಬುದ್ಧಿಶಕ್ತಿ, ಸಮರ್ಪಣೆ ಮತ್ತು ಅವರಲ್ಲಿರುವ ಕುತೂಹಲಗಳು ನಾವೀನ್ಯತೆ ಹಾಗೂ ಆವಿಷ್ಕಾರಗಳಿಗೆ ಮಾರ್ಗ ಗಳನ್ನು ಕಂಡುಕೊಳ್ಳುವಂತಾಗಿದೆ. ಭಾರತ ರತ್ನ ಎಂ.ವಿಶ್ವೇಶ್ವರಾಯ ಅವರ ಹುಟ್ಟುಹಬ್ಬದ ಪ್ರಯುಕ್ತ ಆಚರಿಸಲಾಗುವ ಇಂಜಿನಿಯರ್ ಗಳ ದಿನಕ್ಕೆ ಈ ಮೂಲಕ ಶುಭಾಶಯ ಕೋರುತ್ತಿದ್ದೇನೆಂದು ಹೇಳಿದ್ದಾರೆ.
Advertisement