ಭಗವಾನ್ ಶ್ರೀಕೃಷ್ಣನ ವಿರುದ್ಧ ಟ್ವೀಟ್: ಪ್ರಶಾಂತ್ ಭೂಷಣ್ ವಿರುದ್ಧ ಮತ್ತೊಂದು ಕೇಸ್

ಗವಾನ್ ಶ್ರೀ ಕೃಷ್ಣನ ವಿರುದ್ಧ ಅವಹೇಳನಕಾರಿ ಟ್ಟೀಟ್ ಮಾಡಿದ ಹಿನ್ನೆಲೆಯಲ್ಲಿ ವಕೀಲ ಮತ್ತು ರಾಜಕಾರಣಿ ಪ್ರಶಾಂತ್ ಭೂಷಣ್ ವಿರುದ್ಧ ಕೇಸು ..
ಪ್ರಶಾಂತ್ ಭೂಷಣ್
ಪ್ರಶಾಂತ್ ಭೂಷಣ್
ಮುಜಾಫರ್ ನಗರ: ಭಗವಾನ್ ಶ್ರೀ ಕೃಷ್ಣನ ವಿರುದ್ಧ ಅವಹೇಳನಕಾರಿ ಟ್ಟೀಟ್ ಮಾಡಿದ ಹಿನ್ನೆಲೆಯಲ್ಲಿ ವಕೀಲ ಮತ್ತು ರಾಜಕಾರಣಿ ಪ್ರಶಾಂತ್ ಭೂಷಣ್ ವಿರುದ್ಧ ಕೇಸು ದಾಖಲಿಸಲಾಗಿದೆ. 
ಸ್ವರಾಜ್ ಅಭಿಯಾನ ಸಂಸ್ಥಾಪಕ ಪ್ರಶಾಂತ್ ಭೂಷಣ್ ಅವರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಆರೋಪಿಸಿ, ಅಖಿಲ ಭಾರತ ಹಿಂದೂ ಮಹಾ ಸಭಾ ಅಧ್ಯಕ್ಷ ಯೋಗೇಂದ್ರ ವರ್ಮಾ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ನಿನ್ನೆ ಸಂಜೆ ದೂರು ದಾಖಲಿಸಿದ್ದಾರೆ.
ರೋಮಿಯೋ ಒಬ್ಬಳನ್ನಷ್ಟೇ ಪ್ರೀತಿಸಿದ್ದ, ಆದರೆ ಹುಡುಗಿಯರನ್ನು ಚುಡಾಯಿಸುವುದರಲ್ಲಿ ಕೃಷ್ಣನದ್ದು ದಂತಕತೆ. ಆದಿತ್ಯನಾಥ್ ರಚಿಸಿರುವ ಪಡೆಗೆ  ಆ್ಯಂಟಿ-ಕೃಷ್ಣ ಸ್ಕ್ವಾಡ್ ಎಂದು ಹೆಸರಿಸಲು ಧೈರ್ಯ ಇದೆಯೇ?" ಎಂದು ಬರೆದಿದ್ದರು. ಇದಾದ ನಂತರ ಹಿಂದು ಸಂಘಟನೆಗಳು ತೀವ್ರನಾಗಿ ಆಕ್ರೋಶ ವ್ಯಕ್ತ ಪಡಿಸಿದ ಬೆನ್ನಲ್ಲೇ ಪ್ರಶಾಂತ್ ಭೂಷಣ್  ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com