ಸೈನಿಕರನ್ನು ಅಗೌರವದಿಂದ ಕಾಣುವವರಿಗೆ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು: ಯೋಗೇಶ್ವರ್ ದತ್

ದೇಶ ವಿರೋಧಿಗಳ ವಿರುದ್ಧ ಸೆಣಸುವಾಗಿ ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಸೋನಿಪತ್: ದೇಶ ವಿರೋಧಿಗಳ ವಿರುದ್ಧ ಸೆಣಸುವಾಗಿ ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾಪಡೆಯ ಯೋಧರ ಮೇಲೆ ನಡೆದ ಹಲ್ಲೆ ಕುರಿತಂತೆ ಭಾನುವಾರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯೋಗೇಶ್ವರ್ ದತ್ ಅವರು, ಯಾರೇ ಆಗಲಿ ದೇಶ ವಿರೋಧಿ ಚಟುವಟಿಕೆಯಲ್ಲಿ  ಪಾಲ್ಗೊಂಡಿದ್ದರೆ ಅಂತಹವ ವಿರುದ್ಧ ಹೋರಾಟಕ್ಕೆ ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಶ್ರೀನಗರದಲ್ಲಿ ಸೇನಾಪಡೆಯ ಯೋಧರಿಗಾಗ ಅವಮಾನ ನಿಜಕ್ಕೂ ಇಡೀ ದೇಶದ ತಲೆತಗ್ಗಿಸುವಂತೆ ಮಾಡಿದೆ. ದೇಶ  ಕಾಯುವ ಯೋಧರಿಗೆ ದೇಶವಾಸಿಗಳಾದ ನಾವು ನೀಡುವ ಗೌರವ ಇದೆ ಏನೂ?

ಯಾರೇ ಆಗಲಿ ದೇಶ ವಿರಓಧಿ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಅಂತಹವರ ವಿರುದ್ಧ ಕಾರ್ಯಾಚರಣೆಯಲ್ಲಿ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು, ಸೈನಿಕರನ್ನು ಅಗೌರವದಿಂದ ಕಾಣುವವರಿಗೆ ಕಂಡಲ್ಲೇ ಗುಂಡಿಟ್ಟು  ಕೊಲ್ಲಬೇಕು. ಇಲ್ಲವಾದಲ್ಲಿ ಇಂತಹ ಘಟನೆಗಳು ನಿಲ್ಲುವುದಿಲ್ಲ ಎಂದು ಯೋಗೀಶ್ವರ್ ದತ್ ಹೇಳಿದ್ದಾರೆ.

ಈ ಹಿಂದೆ ಇದೇ ಘಟನೆ ಸಂಬಂಧ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದರು. ಅವರ ಟ್ವೀಟ್ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com