ಸೇನಾಧಿಕಾರಿಗಳ ಕ್ರಮದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತೇಜ್ ಬಹದ್ದೂರ್ ಯಾದವ್ ಅವರು, ಆಹಾರದ ಕುರಿತಂತೆ ನಾನು ಸಾಕ್ಷ್ಯಾಧಾರಗಳನನು ನೀಡಿದ್ದರೆ. ಆದರೂ ನನಗೆ ನ್ಯಾಯ ದೊರೆಯಲಿಲ್ಲ. ಸೇನಾಧಿಕಾರಿಗಳ ಕ್ರಮದ ವಿರುದ್ಧ ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ನ್ಯಾಯ ದೊರಕುವ ವಿಶ್ವಾಸ ನನಗಿದೆ. ನನ್ನ ಕೊನೆಯುಸಿರುರಿರುವವರೆಗೂ ಯೋಧರಿಗಾಗಿ ಹೋರಾಡುತ್ತೇನೆ. ಬಹಳ ಹಿಂದೆಯೇ ದೂರು ಬಂದಿತ್ತು. ಆದರೆ, ಈ ಬಗ್ಗೆ ಯಾರು ಮುಂದೆ ಬಂದಿರಲಿಲ್ಲ. ಸರ್ಕಾರದ ಗಮನಕ್ಕೆ ತರುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.