ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಎಸ್. ಪ್ರಕಾಶ್ ಅವರು, ಹಣಕಾಸು ಮಾಜಿ ಸಚಿವ ಯಶವಂತ್ ಸಿನ್ಹಾ ಅವರ ಉದ್ದೇಶ ಶ್ರೇಷ್ಠವಾದದ್ದು. ಆದರೆ, ಅವರು ತಮ್ಮದೇ ಆದ ಗುರಿಯನ್ನು ಹೊಂದಿದ್ದಾರೆ. ಇದರಂತೆ ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಭಾರತ ಸರ್ಕಾರ ಕೂಡ ತನ್ನದೇ ಆದ ಆದ್ಯತೆ ಹಾಗೂ ಕಾರ್ಯತಂತ್ರಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.