ಚುನಾವಣೆ ಸೋಲಿನ ಬಳಿಕ ಎವಿಎಂ ವಿರುದ್ಧ ಕೇಜ್ರಿವಾಲ್ ಅವರು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಕೇಜ್ರಿವಾಲ್ ವಿರುದ್ಧವೇ ಮಾತನಾಡಿದ್ದ ವಿಶ್ವಾಸ್ ಅವರು, ಕೇವಲ ಮತಯಂತ್ರವನ್ನು ಮಾತ್ರ ತಪ್ಪಿತಸ್ಥ ಎನ್ನಲು ಸಾಧ್ಯವಿಲ್ಲ. ಪಕ್ಷದ ಕಾರ್ಯನೀತಿಯಲ್ಲಿ, ಅಭ್ಯರ್ಥಿ ನಿಶ್ಚಯದಲ್ಲಿ ಆದ ಲೋಪಗಳ ಕುರಿತು ಅವಲೋಕನ ನಡೆಸಬೇಕಿದೆ. ಆಮ್ ಆದ್ಮಿ ಪಕ್ಷ ಮತ್ತೊಂದು ಕಾಂಗ್ರೆಸ್ ಪಕ್ಷವಾಗಬಾರದು ಎಂದು ಹೇಳಿದ್ದರು.