ಅರಣ್ಯ ಸಚಿವ ದಿಂಡುಕ್ಕಲ್ ಸಿ. ಶ್ರೀನಿವಾಸನ್, ಶಿಕ್ಷಣ ಸಚಿವ ಕೆ.ಎ. ಸೆಂಗೋಟ್ಟೈಯಾನ್, ಸಹಕಾರ ಸಚಿವ 'ಸೆಲ್ಲೂರ್' ಕೆ. ರಾಜು ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಆರ್. ಕಾಮರಾಜ್ ಅವರು ಕಳೆದ ಫೆ.28 ರಂದು ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಿದ್ದರು. ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಕುರಿತಂತೆ ಶಶಿಕಲಾ ಅವರೊಂದಿಗೆ ಚರ್ಚೆ ನಡೆಸಿದ್ದೇವೆಂದು ಹೇಳಿದ್ದರು.