ಜಮ್ಮು ಮತ್ತು ಕಾಶ್ಮೀಪದ ಶೋಪಿಯಾನ್ ಜಿಲ್ಲೆಯಲ್ಲಿ ಹಿಬ್ಜುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದ ದಾಳಿಯಲ್ಲಿ ಮೇಜರ್ ಕಮಲೇಶ್ ಪಾಂಡೆಯವರು ಹುತಾತ್ಮರಾಗಿದ್ದರು. ಪಾಂಡೆಯವರ ಅಂತಿಮ ಸಂಸ್ಕಾರ ಉತ್ತರಾಖಂಡ್ ನ ಹಲ್ದ್ವಾನಿ ಗ್ರಾಮದಲ್ಲಿ ನೆರವೇರಿತು. ಹುತಾತ್ಮ ಯೋಧನಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಅಂತಿಮ ಸಂಸ್ಕಾರದಲ್ಲಿ ಸೇನಾಧಿಕಾರಿಗಳೂ ಕೂಡ ಭಾಗಿಯಾಗಿದ್ದರು.