ಗುಜರಾತ್ ರಾಜ್ಯದಲ್ಲಿ ಸೂಕ್ತ ರೀತಿಯ ಭದ್ರತೆಯನ್ನು ಒದಗಿಸದ ಬಿಜೆಪಿ, ರಾಹುಲ್ ಗಾಂಧಿಯವರ ವಿದೇಶ ಪ್ರವಾಸ ಹಿಡಿದು ಜನರನ್ನು ತಪ್ಪು ಹಾದಿಗೆಳೆಯುತ್ತಿದೆ. ಅಧಿವೇಶನದ ವೇಳೆ ನಾವು ಕೇಳಿದ್ದ ಪ್ರಶ್ನೆಯೇ ಒಂದಾಗಿದ್ದರೆ, ಸರ್ಕಾರದ ಉತ್ತರವೇ ಒಂದಾಗಿದೆ. ಘಟನೆಗೆ ಖಂಡನೆ ವ್ಯಕ್ತಪಡಿಸುವ ಬದಲು ಇಂತಹ ಕೃತ್ಯಗಳಿಗೆ ಉತ್ತೇಜನವನ್ನು ನೀಡುತ್ತಿದ್ದಾರೆ. ಇದು ನಿಜಕ್ಕೂ ಬಹಳ ಬೇಸರವನ್ನು ತಂದಿದೆ. ಈ ರೀತಿಯ ಬೆಳವಣಿಗೆಗಳು ನಡೆಯಬಾರದು ಎಂದು ತಿಳಿಸಿದ್ದಾರೆ.