ಕೇಂದ್ರ ಸಚಿವ ಪಿಯೂಷ್ ಗೋಯಲ್
ಕೇಂದ್ರ ಸಚಿವ ಪಿಯೂಷ್ ಗೋಯಲ್

ವಿದ್ಯುತ್ ವಾಹನಗಳಲ್ಲಿ ಭಾರತ ಮುಂಚೂಣಿ ವಹಿಸಲಿದೆ: ಸಚಿವ ಪಿಯೂಷ್ ಗೋಯಲ್

ವಿದ್ಯುತ್ ವಾಹನಗಳನ್ನು ಪ್ರಚುರಪಡಿಸುವಲ್ಲಿ ಭಾರತ ವಿಶ್ವಕ್ಕೆ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಈ ಮೂಲಕ ಮುಂಬೈ....
ಮುಂಬೈ: ವಿದ್ಯುತ್ ವಾಹನಗಳನ್ನು ಪ್ರಚುರಪಡಿಸುವಲ್ಲಿ ಭಾರತ ವಿಶ್ವಕ್ಕೆ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಈ ಮೂಲಕ ಮುಂಬೈ, ದೆಹಲಿ, ಪುಣೆಯಂತಹ ನಗರಗಳು ಮಾಲಿನ್ಯ ರಹಿತವಾಗಲಿವೆ ಎಂದು ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ನವೀಕರಣ ಇಂಧನವನ್ನು ಪ್ರಚಾರ ಮಾಡುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಂಧನ ದಕ್ಷತೆಗೆ ನಾವು ಗಮನ ಹರಿಸುತ್ತಿದ್ದು ಆ ಮೂಲಕ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣ ವಾತಾವರಣದಲ್ಲಿ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು. ಹವಾಮಾನ ಬದಲಾವಣೆ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಬೇಕು ಎಂದು ಹೇಳಿದರು.
ಭಯೋತ್ಪಾದನೆ ಬಗ್ಗೆ ಮಾತನಾಡಿದ ಸಚಿವ ಗೋಯಲ್, ಮಾನವನ ಅಸ್ಥಿತ್ವಕ್ಕೆ ಧಕ್ಕೆಯನ್ನುಂಟುಮಾಡುವ, ಸಮಾಜದಲ್ಲಿ ಅಸ್ಥಿರತೆಯನ್ನು ಉಂಟುಮಾಡುವ ಈ ಅಪಾಯಕಾರಿ ಅಸಹಿಷ್ಣುತೆಗಳಿಂದ ಏನು ಹಾನಿಯುಂಟಾಗುತ್ತದೆ ಎಂದು ಇಡೀ ವಿಶ್ವಕ್ಕೆ ಅರ್ಥವಾಗಿದೆ. ಭಯೋತ್ಪಾದನೆ ವಿರುದ್ಧ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಿ ಮಾತುಕತೆ ಮೂಲಕ ಮಾತ್ರವೇ ಇದನ್ನು ನಿಗ್ರಹಿಸಬಹುದು ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com