ವಿದ್ಯುತ್ ವಾಹನಗಳಲ್ಲಿ ಭಾರತ ಮುಂಚೂಣಿ ವಹಿಸಲಿದೆ: ಸಚಿವ ಪಿಯೂಷ್ ಗೋಯಲ್

ವಿದ್ಯುತ್ ವಾಹನಗಳನ್ನು ಪ್ರಚುರಪಡಿಸುವಲ್ಲಿ ಭಾರತ ವಿಶ್ವಕ್ಕೆ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಈ ಮೂಲಕ ಮುಂಬೈ....
ಕೇಂದ್ರ ಸಚಿವ ಪಿಯೂಷ್ ಗೋಯಲ್
ಕೇಂದ್ರ ಸಚಿವ ಪಿಯೂಷ್ ಗೋಯಲ್
Updated on
ಮುಂಬೈ: ವಿದ್ಯುತ್ ವಾಹನಗಳನ್ನು ಪ್ರಚುರಪಡಿಸುವಲ್ಲಿ ಭಾರತ ವಿಶ್ವಕ್ಕೆ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಈ ಮೂಲಕ ಮುಂಬೈ, ದೆಹಲಿ, ಪುಣೆಯಂತಹ ನಗರಗಳು ಮಾಲಿನ್ಯ ರಹಿತವಾಗಲಿವೆ ಎಂದು ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ನವೀಕರಣ ಇಂಧನವನ್ನು ಪ್ರಚಾರ ಮಾಡುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಇಂಧನ ದಕ್ಷತೆಗೆ ನಾವು ಗಮನ ಹರಿಸುತ್ತಿದ್ದು ಆ ಮೂಲಕ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣ ವಾತಾವರಣದಲ್ಲಿ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು. ಹವಾಮಾನ ಬದಲಾವಣೆ ಸವಾಲುಗಳನ್ನು ಸಾಮೂಹಿಕವಾಗಿ ಎದುರಿಸಬೇಕು ಎಂದು ಹೇಳಿದರು.
ಭಯೋತ್ಪಾದನೆ ಬಗ್ಗೆ ಮಾತನಾಡಿದ ಸಚಿವ ಗೋಯಲ್, ಮಾನವನ ಅಸ್ಥಿತ್ವಕ್ಕೆ ಧಕ್ಕೆಯನ್ನುಂಟುಮಾಡುವ, ಸಮಾಜದಲ್ಲಿ ಅಸ್ಥಿರತೆಯನ್ನು ಉಂಟುಮಾಡುವ ಈ ಅಪಾಯಕಾರಿ ಅಸಹಿಷ್ಣುತೆಗಳಿಂದ ಏನು ಹಾನಿಯುಂಟಾಗುತ್ತದೆ ಎಂದು ಇಡೀ ವಿಶ್ವಕ್ಕೆ ಅರ್ಥವಾಗಿದೆ. ಭಯೋತ್ಪಾದನೆ ವಿರುದ್ಧ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಿ ಮಾತುಕತೆ ಮೂಲಕ ಮಾತ್ರವೇ ಇದನ್ನು ನಿಗ್ರಹಿಸಬಹುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com