ಮೊದಲಿಗೆ ಸಂಬಂಧ ಬಂದಾಗ ನಾನು ಮದುವೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದೆ. ಆದರೆ, ಸಿಕಂದರ್ ಬರ್ಕಾಸ್ ನ ಹೋಟೆಲ್ ನಲ್ಲಿ ಖಾಜಿಯ ಮೂಲಕ ಬಲವಂತವಾಗಿ ಮದುವೆ ಮಾಡಿದ್ದಾನೆ. ಇದೀಗ ಮಗಳು ಮಸ್ಕತ್ ನಲ್ಲಿದ್ದು, ಕೆಲ ದಿನಗಳ ಹಿಂದಷ್ಟೇ ಕರೆ ಮಾಡಿದ್ದಳು. ನನ್ನ ರಕ್ಷಿಸುವಂತೆ ತಿಳಿಸಿದಳು. ಬಳಿಕ ವಿವಾಹ ವ್ಯಕ್ತಿಯನ್ನು ಸಂಪರ್ಕಿಸಿದರೆ, ಮದುವೆಗಾಗಿ ನಾನು ರೂ.5 ಲಕ್ಷ ನೀಡಿದ್ದೆ, ಅದನ್ನು ಹಿಂತಿರುಗಿಸಿದರೆ ಹುಡುಗಿಯನ್ನು ಭಾರತಕ್ಕೆ ವಾಪಸ್ ಕಳುಹಿಸುತ್ತೇನೆಂದು ಹೇಳುತ್ತಿದ್ದಾರೆ.