ಮುಸ್ಲಿಮನಾದ ಕಾರಣಕ್ಕೆ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನ್ನು ಗುರಿ ಮಾಡಿದೆ: ಝಾಕಿರ್ ನಾಯ್ಕ್

ಮುಸ್ಲಿಂ ಧರ್ಮದವನಾಗಿರುವುದರಿಂದ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನನ್ನು ಗುರಿ ಮಾಡಿದೆ ಎಂದು ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್ ಗುರುವಾರ ಹೇಳಿದ್ದಾನೆ...
ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್
ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್
ಮುಂಬೈ; ಮುಸ್ಲಿಂ ಧರ್ಮದವನಾಗಿರುವುದರಿಂದ 'ಹಿಂದು ರಾಷ್ಟ್ರವಾದಿ' ಮೋದಿ ಸರ್ಕಾರ ನನ್ನನನ್ನು ಗುರಿ ಮಾಡಿದೆ ಎಂದು ವಿವಾದಿತ ಮುಸ್ಲಿಂ ಧರ್ಮ ಪ್ರವಚನಕಾರ ಝಾಕೀರ್ ನಾಯ್ಕ್ ಗುರುವಾರ ಹೇಳಿದ್ದಾನೆ. 
ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಝಾಕೀರ್ ನಾಯ್ಕ್, ರಾಜಕೀಯ ಕಾರಣಗಳಿಗಾಗಿ ಮುಸ್ಲಿಮನಾದ ನನ್ನನ್ನು ಭಾರತದ ಹಿಂದೂ ರಾಷ್ಟ್ರೀಯ ವಾದಿ ಮೋದಿ ಸರ್ಕಾರ ಗುರಿಮಾಡಿದೆ. ಹೀಗಾಗಿ ಭಾರತ ಸರ್ಕಾರದ ಬೇಡಿಕೆಯನ್ನು ತಿರಸ್ಕರಿಸಿ, ನನ್ನ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನ್ನು ಜಾರಿಗೊಳಿಸಬಾರದು ಎಂದು ಹೇಳಿದ್ದಾನೆ. 
ಈ ಸಂಬಂಧ ಫ್ರಾನ್ಸ್ ನಲ್ಲಿರುವ ಇಂಟರ್ ಪೋಲ್ ಪ್ರಧಾನ ಕಾರ್ಯದರ್ಶಿಗೆ ಝಾಕೀರ್ ನಾಯ್ಕ್ ಪರ ವಕೀಲರು ಪತ್ರವೊಂದನ್ನು ಬರೆದಿದ್ದು, ಝಾಕೀರ್ ನಾಯ್ಕ್ ದೇಶ ಭ್ರಷ್ಟರಲ್ಲ. ಭಯೋತ್ಪಾದನೆಗೂ ಪಚೋದನೆ ನೀಡಿಲ್ಲ ಎಂದು ಅಟಾರ್ನಿ ಕ್ರೂಕರ್ ಬಿನ್ನಿಂಗ್ಸ್ ಪತ್ರದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com