ನವದೆಹಲಿ: ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರೊಂದಿಗೆ ಸ್ನೇಹಿದಿಂದ ವರ್ತಿಸುವ ಮೂಲಕ ತೆರಿಗೆದಾರನ ಭಯವನ್ನು ಅಂತ್ಯಗೊಳಿಸಿ ಭಾರತವನ್ನು ಹೆಚ್ಚು ತೆರಿಗೆ ಸಲ್ಲಿಸುವ ಸಮಾಜವನ್ನಾಗಿ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಇಂದು ನೇರ ಮತ್ತು ಪರೋಕ್ಷ ತೆರಿಗೆ ಅಧಿಕಾರಿಗಳ ರಾಜಸ್ವ ಗ್ಯಾನ್ ಸಂಗಮದ ಎರಡನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಸ್ವಾತಂತ್ರ್ಯದ ನಂತರದ ದೊಡ್ಡ ತೆರಿಗೆ ಸುಧಾರಣೆಯ ಪ್ರಯೋಜನ, ಜಿಎಸ್ಟಿ ಮತ್ತು ಬೆಲೆಗಳು ಕಡಿಮೆಯಾಗಿರುವುದನ್ನು ಸಾಮಾನ್ಯ ವ್ಯಕ್ತಿಗೆ ತಲುಪುವಂತೆ ನೋಡಿಕೊಳ್ಳಿ ಎಂದರು.
ಎರಡು ದಿನಗಳ ಈ ಸಮ್ಮೇಳನದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಮತ್ತು ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಮತ್ತು ಕಸ್ಟಮ್ಸ್ (ಸಿಬಿಇಸಿ)ಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.