ಸರಾಗವಾಗಿ ನಡೆಯುತ್ತಿದ್ದ ಆರ್ಥಿಕ ವ್ಯವಸ್ಥೆಯನ್ನು ನೋಟು ನಿಷೇಧದ ಮೂಲಕ ಕೇಂದ್ರ ಸರ್ಕಾರ ಹಾಳುಗೆಡವಿದೆ. ಇದರ ಪರಿಣಾಮ ದೇಶದಲ್ಲಿ ಆರ್ಥಿಕಾಭಿವೃದ್ಧಿ ಕುಸಿದಿದ್ದು, ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ದೇಶದ ಸಾಕಷ್ಟು ವಾಣಿಜ್ಯೋಧ್ಯಮಗಳು ಇಂದು ನೋಟು ನಿಷೇಧದ ಪರಿಣಾಮ ನಷ್ಟವನ್ನು ಅನುಭವಿಸುತ್ತಿವೆ. ನೋಟು ನಿಷೇಧದಿಂದ ಭಯೋತ್ಪಾದನೆಗೆ ಕಡಿವಾಣ ಬೀಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಸುಳ್ಳಾಗಿದ್ದು, ಈ ಹಿಂದಿಗಿಂತಲೂ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗಿದೆ. ಅಂತೆಯೇ ನಕಲಿ ನೋಟು ಹಾವಳಿ ತಪ್ಪುತದೆ ಎಂಬ ಹೇಳಿಕೆ ಕೂಡ ಸುಳ್ಳಾಗಿದ್ದು, 2000 ನೋಟುಗಳ ನಕಲು ಎಗ್ಗಿಲ್ಲದೇ ಸಾಗುತ್ತಿದೆ.