ನಾರಾಯಣಾ ಮೂರ್ತಿ ವಿರುದ್ಧ ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಶೇಷಸಾಯಿ ಅಸಮಾಧಾನ

ತಮ್ಮ ಬಗ್ಗೆ ಇನ್ಫೋಸಿಸ್ ನ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮಾಡಿರುವ ಆರೋಪಗಳು ಸುಳ್ಳು ಎಂದು ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಅರ್ ಶೇಷ ಸಾಯಿ ಹೇಳಿದ್ದಾರೆ.
ಆರ್ ಶೇಷ ಸಾಯಿ
ಆರ್ ಶೇಷ ಸಾಯಿ
Updated on
ಬೆಂಗಳೂರು: ತಮ್ಮ ಬಗ್ಗೆ ಇನ್ಫೋಸಿಸ್ ನ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮಾಡಿರುವ ಆರೋಪಗಳು ಸುಳ್ಳು ಎಂದು ಇನ್ಫೋಸಿಸ್ ನ ಮಾಜಿ ಅಧ್ಯಕ್ಷ ಅರ್ ಶೇಷ ಸಾಯಿ ಹೇಳಿದ್ದಾರೆ. 
ಷೇರುದಾರರಿಗೆ ತಾವು ತಪ್ಪು ಮಾಹಿತಿ ನೀಡಿರುವಂತೆ ಬಿಂಬಿಸುವ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಶೇಷ ಸಾಯಿ ಹೇಳಿದ್ದಾರೆ. ಇನ್ಫೋಸಿಸ್ ಮಂಡಳಿಗೆ ರಾಜೀನಾಮೆ ನೀಡಿದ ಬಳಿಕ, ಪ್ರಚೋದನೆಗಳ ಹೊರತಾಗಿಯೂ ನಾನು ಸಾರ್ವಜನಿಕ ಹೇಳಿಕೆ ನೀಡುವುದರಿಂದ ದೂರ ಉಳಿದಿದ್ದೆ. ಆದರೆ ನಾರಾಯಣ ಮೂರ್ತಿ ಅವರು ಹೂಡಿಕೆದಾರರಿಗೆ ಹೇಳಿಕೆ ನೀಡಿರುವುದು ನನ್ನನ್ನು ಸಾರ್ವಜನಿಕ ಹೇಳಿಕೆ ನೀಡುವಂತೆ ಮಾಡಿದೆ ಎಂದು ಶೇಷ ಸಾಯಿ ಹೇಳಿದ್ದಾರೆ. 
ಸಿಇಒ ಸಿಕ್ಕಾ ರಾಜೀನಾಮೆ ಬಳಿಕ ಶೇಷಸಾಯಿ ಅವರು ಆ.24 ರಂದು ಇನ್ಫೋಸಿಸ್ ನಾನ್ ಎಕ್ಸಿಕ್ಯುಟಿವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಳಿಕ ನಂದನ್ ನಿಲೇಕಣಿ ನಾನ್ ಎಕ್ಸಿಕ್ಯುಟಿವ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com