ಷೇರುದಾರರಿಗೆ ತಾವು ತಪ್ಪು ಮಾಹಿತಿ ನೀಡಿರುವಂತೆ ಬಿಂಬಿಸುವ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಶೇಷ ಸಾಯಿ ಹೇಳಿದ್ದಾರೆ. ಇನ್ಫೋಸಿಸ್ ಮಂಡಳಿಗೆ ರಾಜೀನಾಮೆ ನೀಡಿದ ಬಳಿಕ, ಪ್ರಚೋದನೆಗಳ ಹೊರತಾಗಿಯೂ ನಾನು ಸಾರ್ವಜನಿಕ ಹೇಳಿಕೆ ನೀಡುವುದರಿಂದ ದೂರ ಉಳಿದಿದ್ದೆ. ಆದರೆ ನಾರಾಯಣ ಮೂರ್ತಿ ಅವರು ಹೂಡಿಕೆದಾರರಿಗೆ ಹೇಳಿಕೆ ನೀಡಿರುವುದು ನನ್ನನ್ನು ಸಾರ್ವಜನಿಕ ಹೇಳಿಕೆ ನೀಡುವಂತೆ ಮಾಡಿದೆ ಎಂದು ಶೇಷ ಸಾಯಿ ಹೇಳಿದ್ದಾರೆ.