ಈ ಘಟನೆ ತೆಲಂಗಾಣದ ನಗರ್ ಕರ್ನೂಲ್ ನಿಂದ ವರದಿಯಾಗಿದ್ದು, ಸ್ವಾತಿ ಎಂಬ ಮಹಿಳೆ ಸುಧಾಕರ್ ರೆಡ್ಡಿ ಎಂಬಾತನನ್ನು ಮದುವೆಯಾಗಿದ್ದಳು. ದಂಪತಿಗಳಿಗೆ ಈಗಾಗಲೇ ಇಬ್ಬರು ಮಕ್ಕಳು ಕೂಡ ಇದ್ದು, ಮದುವೆ ಬಳಿಕ ಸ್ವಾತಿಗೆ ರಾಜೇಶ್ ಎಂಬಾತನೊಂದಿಗೆ ಪರಿಚಯವಾಗಿದೆ. ಪರಿಚಯ ಸ್ನೇಹ-ಪ್ರೀತಿಗೆ ತಿರುಗಿದ್ದು, ದಿನಗಳೆದಂತೆ ಪ್ರೀತಿ ದೈಹಿಕ ಸಂಬಂಧಕ್ಕೂ ತಿರುಗಿದೆ. ಸ್ವಾತಿ ಮತ್ತು ರಾಜೇಶ್ ಯಾರಿಗೂ ತಿಳಿಯದಂತೆ ಅಕ್ರಮ ಸಂಬಂಧ ಮುಂದುವರೆಸಿದ್ದು, ಒಂದು ದಿನ ತನ್ನ ಗಂಡನನ್ನು ದೂರ ಮಾಡುವ ಮೂಲಕ ಶಾಶ್ವತವಾಗಿ ಲವರ್ ನೊಂದಿಗೇ ಇರಲು ಸ್ವಾತಿ ನಿರ್ಧರಿಸಿದ್ದಳು.