ಲಖನೌ: ಉತ್ತರ ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ನಂತರ ಹಲವು ಅಚ್ಚರಿಯ ಘಟನೆಗಳು, ಸಂಪ್ರದಾಯಗಳು ಪ್ರಾರಂಭವಾಗಿದೆ. ಈಗ ಅಂತಹದ್ದೇ ಮತ್ತೊಂದು ಸುದ್ದಿ ಬಂದಿದ್ದು, ವಾರ್ಷಿಕ ಐಎಎಸ್ ಸಪ್ತಾಹ ಕಾರ್ಯಕ್ರಮದಲ್ಲಿ ನಾನ್ ವೆಜ್ ಗೆ ಕತ್ತರಿ ಬಿದ್ದಿದೆ.
ಮುಖ್ಯಮಂತ್ರಿಗಳಿಗೆ ಇಷ್ಟವಾಗಿರುವುದು ಹಾಗೂ ಇಷ್ಟವಿಲ್ಲದೇ ಇರುವುದನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿಗಳು ಸಸ್ಯಹಾರಿಗಳಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಆಡಳಿತ ಸೇವೆಯ ಸಪ್ತಾಹ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಮೆನುವಿನಲ್ಲಿ ನಾನ್ ವೆಜ್ ನ್ನು ತೆಗೆದುಹಾಕಲಾಗಿದೆ.