ಲಖನೌ: ಉತ್ತರ ಪ್ರದೇಶ ಶಾಲೆಗಳಲ್ಲಿ ಕ್ರಿಸ್ ಮಸ್ ಆಚರಣೆಯನ್ನು ನಿಷೇಧಿಸಬೇಕು ಎಂದು ಹಿಂದೂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಯೋಗಿ ಆದಿತ್ಯನಾಥ್ ಅವರ ಹಿಂದೂ ಯುವ ವಾಹಿನಿಯೊಂದಿಗೆ ಗುರುತಿಸಿಕೊಂಡಿರುವ ಹಿಂದೂ ಜಾಗರಣಾ ಮಂಚ್ ಅಲೀಘರ್ ನಲ್ಲಿರುವ ಹಿಂದೂ ವಿದ್ಯಾರ್ಥಿಗಳು ಬಹುಸಂಖ್ಯಾತರಾಗಿರುವ ಕ್ರೈಸ್ತ ಶಾಲೆಗಳಲ್ಲಿ ಕ್ರಿಸ್ ಮಸ್ ಆಚರಣೆ ಮಾಡದಂತೆ ಹೇಳಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಹಿಂದೂ ಜಾಗರಣ ಮಂಚ್ ನ ಅಧ್ಯಕ್ಷ ಸೋನು ಸವಿತ ಕ್ರಿಸ್ ಮಸ್ ಆಚರಣೆಗಾಗಿ ವಿದ್ಯಾರ್ಥಿಗಳಿಗೆ ಬೊಂಬೆಗಳು ಹಾಗೂ ಗಿಫ್ಟ್ ಗಳನ್ನು ತರುವಂತೆ ಸೂಚಿಸಲಾಗುತ್ತಿದೆ, ಈ ಮೂಲಕ ಮುಂದೊಂದು ದಿನ ಮತಾಂತರ ನಡೆಸುವ ಉದ್ದೆಶ ಹೊಂದಲಾಗಿದೆ ಎಂದು ಆರೋಪಿಸಿದ್ದಾರೆ.