ಇದೇ ಡಿಸೆಂಬರ್ 21ರಂದು ಆರ್ ಕೆನಗರ ಉಪಚುನಾವಣೆಯ ಮತದಾನ ನಡೆಯಲಿದ್ದು, ಆಡಳಿತಾ ರೂಢ ಎಐಎಡಿಎಂಕೆ ಹಾಗೂ ಶಶಿಕಲಾ ಬಣದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಶತಾಯಗತಯಾ ಈ ಸ್ಥಾನವನ್ನು ಗೆಲ್ಲಲ್ಲೇ ಬೇಕು ಎಂದು ರಾಜಕೀಯ ಪಕ್ಷಗಳು ಪಣ ತೊಟ್ಟಿದ್ದು, ಇದೇ ಕಾರಣಕ್ಕೆ ಮತದಾರರಿಗೆ ವ್ಯಾಪಕ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಏಪ್ರಿಲ್ ನಲ್ಲೂ ಚುನಾವಣಾ ಆಯೋಗ ಮತದಾನವನ್ನು ರದ್ದುಗೊಳಿಸಿ ಮುಂದೂಡಿತ್ತು.