ಭಟ್ಟಾರಕ ಸ್ವಾಮೀಜಿ ಆನೆಗೆ ಮೇವು ನೀಡಲು ಹೋಗಿದ್ದರು. ಈ ವೇಳೆ ಆನೆ ಸೊಂಡಿನಿಂದ ರಭಸದಿಂದ ಹೊಡೆದಿದೆ. ಬಳಿಕ ಸ್ವಾಮೀಜಿ ಕೆಳಗೆ ಬಿದ್ದಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಕಲ್ಲಿನ ಮೇಲೆ ಸ್ವಾಮೀಜಿಯವರ ತಲೆಗೆ ತೀವ್ರವಾಗಿ ಗಾಯವಾಗಿದೆ. ಕೂಡಲೇ ಸ್ವಾಮೀಜಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.