ನವದೆಹಲಿ: ಮೊಬೈಲ್ ಫೋನ್ ಗಳ ಹಾನಿಕಾರಕ ವಿಕಿರಣಗಳನ್ನು ತಡೆಯಲು ಸ್ಥಿರ ದೂರವಾಣಿಯ ರಿಸೀವರ್ ನ್ನು ಹಿಡಿದುಕೊಂಡು ಇಂದು ಸಂಸತ್ತು ಆವರಣದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಓಡಾಡುತ್ತಿರುವುದು ಕಂಡುಬಂತು.
ಮೊಬೈಲ್ ಫೋನ್ ಗಳು ಹೊರಸೂಸುವ ಹಾನಿಕಾರಕ ವಿಕಿರಣಗಳಿಂದ ರಕ್ಷಿಸಿಕೊಳ್ಳಲು ತಮ್ಮ ಮೊಬೈಲ್ ಫೋನ್ ಗೆ ನೇರಳೆ ಬಣ್ಣದ ಸ್ಥಿರ ದೂರವಾಣಿಯ ರಿಸೀವರ್ ನ್ನು ಸಂಪರ್ಕಿಸಿ ಮಾತನಾಡುತ್ತಿರುವುದು ಕಂಡುಬಂತು.
ಇಂದು ಬೆಳಗ್ಗೆ ಚಳಿಗಾಲದ ಅಧಿವೇಶನಲ್ಲಿ ಭಾಗವಹಿಸಲು ಪ್ರಕಾಶ್ ಜಾವಡೇಕರ್ ನೇರಳೆ ಬಣ್ಣದ ಸ್ಥಿರ ದೂರವಾಣಿ ರಿಸೀವರ್ ನ್ನು ಹಿಡಿದುಕೊಂಡು ಸಂಸತ್ತು ಬಳಿ ಬಂದರು. ಆದರೆ ಸಚಿವರು ತಾವೇಕೆ ಸ್ಥಿರ ದೂರವಾಣಿ ರಿಸೀವರ್ ನ್ನು ತಂದಿದ್ದೇನೆ ಎಂದು ಬಹಿರಂಗಪಡಿಸಲಿಲ್ಲ.