ರಕ್ಷಣೆಗೊಂಡಿರುವ ಪ್ರಯಾಣಿಕ ಬಿ.ಎಂ ದಯಾನಂದ್ ಅವರು ಮಾತನಾಡಿ, 11 ಗಂಟೆ ಸುಮಾರಿಗೆ ಬೋಟನ್ನು ಹತ್ತಿದ್ದೆವು. 11 ಗಂಟೆ ಸುಮಾರಿಗೆ ಬೋಟನ್ನು ಹತ್ತಿ 12.30 ರವರೆಗೂ ವಿಹಾರ ನಡೆಸಿದ್ದೆವು. ಮಧ್ಯಾಹ್ನ 1.30ಕ್ಕೆ ಹಿಂತಿರುಗಿ ಬರುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆ ಎದುರಾಗಿ ಬೋಟು ಸಮುದ್ರದ ಮಾರ್ಗದ ಮಧ್ಯೆಯೇ ಕೆಟ್ಟು ನಿಂತಿತ್ತು. ಬಳಿಕ ಬೋಟು ನಡೆಸುವವರು ಸಾಕಷ್ಟು ಪ್ರಯತ್ನ ನಡೆಸಿದರೂ ಬೋಟು ಸರಿಹೋಗಲಿಲ್ಲ. ಬಳಿಕ ನಾವು ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದ್ದೆವು. ಕರೆಯನ್ನು ಸ್ವೀಕರಿಸಿದ ಪೊಲೀಸರು ನಮಗೆ ಯಾವುದೇ ಸಹಾಯವನ್ನು ಮಾಡಲಿಲ್ಲ. ಕೆಲ ಹೊತ್ತಿನ ಬಳಿಕ ಸ್ಥಳದಲ್ಲಿ ಜೋರಾಗಿ ಗಾಳಿ ಬೀಸಲು ಆರಂಭವಾಯಿತು. ಬೋಟು ಅಲುಗಾಡಲು ಆರಂಭಿಸಿತು. ಈ ವೇಳೆ ಎಲ್ಲರಲ್ಲೂ ಭೀತಿಯುಂಟಾಗಿತ್ತು ಎಂದು ಹೇಳಿದ್ದಾರೆ.