ನವದೆಹಲಿ: ಪಠಾಣ್ ಕೋಟ್ ನ ಬಮಿಯಾಲ್ ನಲ್ಲಿರುವ ಭಾರತ ಮತ್ತು ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ನಸುಳುಕೋರನೊಬ್ಬನನ್ನು ಭಾರತೀಯ ಸೇನೆ ಮಂಗಳವಾರ ಹತ್ಯೆ ಮಾಡಿದೆ.
ಬೆಳಿಗ್ಗೆ 8.15ರ ಸುಮಾರಿಗೆ 50 ಮೀಟರಗಳ ದೂರದ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದಿತ್ತು. ಪಾಕಿಸ್ತಾನದ ನುಸುಳುಕೋರರು ಭಾರತದ ಗಡಿ ನುಸುಳಲು ಯತ್ನಿಸುತ್ತಿದ್ದರು. ಈ ವೇಳೆ ಸೇನೆ ಓರ್ವ ನುಸುಳುಕೋರನನ್ನು ಹತ್ಯೆ ಮಾಡಿದೆ ಎಂದು ಗಡಿ ಭದ್ರತಾ ಪಡೆಯ ಅಧಿಕಾರಿ ಹೇಳಿದ್ದಾರೆ.
ಪಠಾಣ್ ಕೋರ್ಟ್ ಬಮಿಯಾಲ್ ಪ್ರದೇಶ ಸಿಂಬಲ್ ಗಡಿಯಲ್ಲಿ ಪಾಕಿಸ್ತಾನ ನುಸುಳುಕೋರನನ್ನು ಹತ್ಯೆ ಮಾಡಲಾಗಿದೆ. ನುಸುಳುಕೋರನನ್ನು ಹತ್ಯೆ ಮಾಡಿದ ಸ್ಥಳದಲ್ಲಿ ಮಂಜು ಆವರಿಸಿದ್ದು, ಮೃತದೇಹವನ್ನು ಹೊರ ತರಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement