ಕಾದು ನೋಡಿ, ನಾಳೆಯಿಂದ ಹೊಸ ಪ್ರತಿಭಟನೆ ಆರಂಭಿಸುತ್ತೇವೆ: ವಿ.ಕೆ.ಶಶಿಕಲಾ

ಕಾದು ನೋಡಿ, ನಾಳೆಯಿಂದ ನಾವು ಹೊಸ ಪ್ರತಿಭಟನೆ ಆರಂಭಿಸುತ್ತೇವೆ. ತಂತ್ರಗಳನ್ನು ವಿಳಂಬ...
ವಿ.ಕೆ.ಶಶಿಕಲಾ
ವಿ.ಕೆ.ಶಶಿಕಲಾ
Updated on
ಚೆನ್ನೈ: ಕಾದು ನೋಡಿ, ನಾಳೆಯಿಂದ ನಾವು ಹೊಸ ಪ್ರತಿಭಟನೆ ಆರಂಭಿಸುತ್ತೇವೆ. ತಂತ್ರಗಳನ್ನು ವಿಳಂಬ ಮಾಡುವುದು ಪಕ್ಷದಲ್ಲಿ ವಿಭಜನೆ ಮಾಡುವ ಪ್ರಯತ್ನ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೆನ್ನೈ ಹೊರವಲಯದಲ್ಲಿರುವ ರೆಸಾರ್ಟ್ ನಲ್ಲಿರುವ ಶಾಸಕರನ್ನು ಭೇಟಿ ಮಾಡಿ ಸಭೆ ನಡೆಸಿದ ಬಳಿಕ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ  ಎಲ್ಲಾ ಶಾಸಕರು ಚೆನ್ನಾಗಿದ್ದಾರೆ ಮತ್ತು ಸಂತೋಷವಾಗಿದ್ದಾರೆ. ರಾಜ್ಯಪಾಲರಿಂದ ಪ್ರತಿಕ್ರಿಯೆ ಬರುವವರೆಗೆ ನಾವು ಈ ಕ್ಷಣದವರೆಗೂ ತಾಳ್ಮೆಯಿಂದ ಕಾಯುತ್ತಿದ್ದೆವು. ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪಕ್ಷದ ಶಾಸಕರನ್ನು ಭೇಟಿಯಾದ ನಂತರ ನನಗೆ ಸಂತೋಷವಾಗಿದೆ. ಸರ್ಕಾರ ರಚನೆಗೆ ಅವಕಾಶ ನೀಡದೆ ಸಮಯ ವಿಳಂಬ ಮಾಡುತ್ತಿರುವುದು ಪಕ್ಷವನ್ನು ಒಡೆಯುವ ತಂತ್ರ ಎನಿಸುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com