ಹಲ್ಲೆ ನಡೆಸಿರುವುದಷ್ಟೇ ಅಲ್ಲದೇ, ಡಿಎಂಕೆ ಶಾಸಕರು ವಿಧಾನಸಭೆಯ ಸ್ಪೀಕರ್ ಆಸನದಲ್ಲಿ ಕುಳಿತು ಸಭ್ಯತೆಯ ರೇಖೆ ದಾಟಿ ವರ್ತಿಸಿದ್ದಾರೆ. ಶಾಸಕರ ವರ್ತನೆಯ ಬಗ್ಗೆ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ. ಧನಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದು, ನನಗೆ ಉಂಟಾದ ಹಿಂಸೆಯ ಬಗ್ಗೆ ಯಾರಲ್ಲಿ ದೂರು ನೀಡಲಿ ಎಂದು ಪ್ರಶ್ನಿಸಿದ್ದಾರೆ.