ಒನ್ ವರ್ಲ್ಡ್: ಕಿಲ್ಲಿಂಗ್ ಫಾರ್ ಕನ್ಸರ್ವೇಷನ್ (One World: Killing for Conservation) ಶೀರ್ಷಿಕೆಯಡಿ ಬಿಬಿಸಿಯ ದಕ್ಷಿಣ ಏಷ್ಯಾದ ಪ್ರತಿನಿಧಿ ಜಸ್ಟಿನ್ ರೋಲಟ್ ವರದಿ ಪ್ರಕಟಿಸಿದ್ದರು. ಘೇಂಡಾ ಮೃಗಗಳಿಗೆ ಅಪಾಯಕಾರಿ ಎಂದು ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲುವುದಕ್ಕೆ ಕಾಝಿರಂಗ ರಾಷ್ಟ್ರೀಯ ಉದ್ಯಾನದಲ್ಲಿರುವ ಅರಣ್ಯಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹುಲಿ, ಘೇಂಡಾ ಮೃಗಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಈ ಕಠಿಣ ನಿರ್ಧಾರವನ್ನು ಬಿಬಿಸಿ ತನ್ನ ವರದಿಯಲ್ಲಿ ಪ್ರಶ್ನಿಸಿತ್ತು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಫೆ.15 ರಂದು ವರದಿ ಪ್ರಕಟಿಸಿತ್ತು.