ಎತ್ತಿನಗಾಡಿಗೆ ಉತ್ತರಪ್ರದೇಶ ಸಚಿವರ ಕಾರು ಡಿಕ್ಕಿ: ಓರ್ವ ಸಾವು
ಎತ್ತಿನಗಾಡಿಗೆ ಉತ್ತರಪ್ರದೇಶ ಸಚಿವರ ಕಾರು ಡಿಕ್ಕಿ: ಓರ್ವ ಸಾವು

ಎತ್ತಿನಗಾಡಿಗೆ ಉತ್ತರಪ್ರದೇಶ ಸಚಿವರ ಕಾರು ಡಿಕ್ಕಿ: ಓರ್ವ ಸಾವು

ಉತ್ತರಪ್ರದೇಶ ರಾಜ್ಯ ಸಚಿವ ಓಂ ಪ್ರಕಾಶ್ ಸಿಂಗ್ ಅವರ ಕಾರು ಎತ್ತಿನಗಾಡಿಯೊಂದಕ್ಕೆ ಗುದ್ದಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಹರ್'ದೋಯ್ ನಲ್ಲಿ ಮಂಗಳವಾರ...

ಹರ್'ದೋಯ್: ಉತ್ತರಪ್ರದೇಶ ರಾಜ್ಯ ಸಚಿವ ಓಂ ಪ್ರಕಾಶ್ ಸಿಂಗ್ ಅವರ ಕಾರು ಎತ್ತಿನಗಾಡಿಯೊಂದಕ್ಕೆ ಗುದ್ದಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಹರ್'ದೋಯ್ ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕಾರು ಚಾಲಕನನ್ನು ಬಂಧನಕ್ಕೊಳಪಡಿಸಲಾಗಿದ್ದು, ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆ ವೇಳೆ ಕಾರಿನಲ್ಲಿ ಕೆಲ ಮದ್ಯದ ಬಾಟಲಿಗಳನ್ನು ದೊರಕಿದ್ದು ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಲ್ಹೋತ್ರಾ ಅವರು ಹೇಳಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಲ್ಹೋತ್ರಾ ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com