ಚಿಟ್ ಫಂಡ್ ಹಗರಣ: ಬಂಡೋಪಧ್ಯಾಯ ಬಂಧನ ಅವಧಿ ವಿಸ್ತರಿಸುವಂತೆ ಸಿಬಿಐ ಆಗ್ರಹ

ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಕಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಸಂಸದ ಸುದೀಪ್ ಬಂಡೋಪಧ್ಯಾಯ ಅವರ ಬಂಧನವ ಅವಧಿಯನ್ನು ವಿಸ್ತರಿಸುವಂತೆ ಸಿಬಿಐ ಸೋಮವಾರ...
ತೃಣಮೂಲ ಕಾಂಗ್ರೆಸ್ ಪಕ್ಷ ಸಂಸದ ಸುದೀಪ್ ಬಂಡೋಪಧ್ಯಾಯ
ತೃಣಮೂಲ ಕಾಂಗ್ರೆಸ್ ಪಕ್ಷ ಸಂಸದ ಸುದೀಪ್ ಬಂಡೋಪಧ್ಯಾಯ

ನವದೆಹಲಿ: ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಕಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಸಂಸದ ಸುದೀಪ್ ಬಂಡೋಪಧ್ಯಾಯ ಅವರ ಬಂಧನವ ಅವಧಿಯನ್ನು ವಿಸ್ತರಿಸುವಂತೆ ಸಿಬಿಐ ಸೋಮವಾರ ಆಗ್ರಹಿಸಿದೆ.

ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಬಂಡೋಪಧ್ಯಾಯ ಅವರಿಗೆ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಮೂರನೇ ಬಾರಿ ವಿಚಾರಣೆಗೆ ಆಗಮಿಸಿದ ಟಿಎಂಸಿ ನಾಯಕನನ್ನು ಸುಮಾರು 4 ಗಂಟೆಗಳ ಕಾಲ ತೀವ್ರ ವಿಚಾರಣೆ ನಡೆಸಿ ಬಂಧನಕ್ಕೊಳಪಡಿಸಿತ್ತು.

ಪ್ರಕರಣ ಸಂಬಂಧ ಬುಧವಾರವಷ್ಟೇ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯವು ಬಂಡೋಪಧ್ಯಾಯ ಅವರನ್ನು 6 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿತ್ತು. ಇಂದಿಗೆ ಈ ಅವಧಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಮತ್ತೆ 8 ದಿನಗಳ ವಶಕ್ಕೆ ನೀಡುವಂತೆ ಆಗ್ರಹಿಸಿದೆ ಎಂದು ತಿಳಿಸಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com