ಲಖನೌ: ಉತ್ತರಪ್ರದೇಶದಲ್ಲಿ ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಜಂಖಾನ್ ರಂತ ಗೂಂಡಾಗಳಿಗೆ ಅಖಿಲೇಶ್ ಯಾದವ್, ಮಾಯಾವತಿ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶ ರಾಜ್ಯದ ಬಿಜೆಪಿ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಅವರು ಶುಕ್ರವಾರ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರೌಡಿಯಾಗಿದ್ದ ಮುಖ್ತಾರ್ ಅನ್ಸಾರಿಯವರನ್ನು ಬಿಎಸ್ ಪಿ ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಮೂಲಕ ಆತನನ್ನು ರಾಜಕೀಯ ವ್ಯಕ್ತಿಯಾಗಿಸಿದೆ. ಕ್ರಿಮಿನಲ್ ಗಳ ವಿರುದ್ಧ ಮಾಯಾವತಿಯವರು ಕ್ರಮ ಕೈಗೊಳ್ಳುತ್ತೇನೆಂದು ಹೇಳಿದ್ದರು. ಆದರೆ, ಅನ್ಸಾರಿ ಸೇರ್ಪಡೆಯಿಂದ ಅದು ಸುಳ್ಳು ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ. ಬಿಜೆಪಿ ಒಮ್ಮೆ ಅಧಿಕಾರಕ್ಕೆ ಬಂದ ಬಳಿಕ ಅಖಿಲೇಶ್ ಯಾವದ್ ಆಗಲೀ ಅಥವಾ ಮಾಯಾವತಿಯಾಗಲು ಕ್ರಿಮಿನಲ್ ಗಳಾಗಿರುವ ಅಟಿಕ್ ಅಹ್ಮದ್ ಮತ್ತು ಅಜಂಖಾನ್ ರಂತಹವರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಮಾಜವಾದಿ ಪಕ್ಷವಾಗಲೀ, ಬಿಎಸ್ ಪಿ ಪಕ್ಷವಾಗಲೀ ಗೂಂಡಾಗಳ ಪರವಾಗಿ ಹೋರಾಟ ನಡೆಸಲು ಸಾಧ್ಯವಿಲ್ಲ. ಕ್ರಿಮಿನಲ್ ಗಳು ಹಾಗೂ ಮಾಫಿಯಾಗಳ ವಿರುದ್ಧ ಬಿಜೆಪಿ ಕಠಿಣ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Advertisement