ಚೆನ್ನೈ: ಕಾಶ್ಮೀರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತರಾದ ತಮಿಳುನಾಡಿನ ಯೋಧರ ಕುಟುಂಬಗಳಿಗೆ ತಲಾ 20 ಲಕ್ಷ ರು ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಘೋಷಿಸಿದ್ದಾರೆ.
ಕಾಶ್ಮೀರದಲ್ಲಿ ಹಿಮಪಾತಕ್ಕೆ ಬಲಿಯಾದ ತಂಜಾವರು ಮತ್ತು ಮಧುರೈ ಜಿಲ್ಲೆಗಳ ಯೋಧರಾದ ಬಿ ಇಳವರಸನ್, ಮತ್ತು ಸುಂದರಪಂಡಿ ಅವರಿಗೆ ಸಿಎಂ ಪನ್ನೀರ್ ಸೆಲ್ವಂ ಶ್ರದ್ಧಾಂಜಲಿ ಸಲ್ಲಿಸಿದರು.
ಜಯಲಲಿತಾ ಸಿಎಂ ಆಗಿದ್ದ ಅವಧಿಯಲ್ಲಿ ಮೃತ ಯೋಧರ ಪರಿಹಾರ ಧನವನ್ನು 10 ಲಕ್ಷದಿಂದ 20 ಲಕ್ಷಕ್ಕೇರಿಸಿದ್ದರು ಎಂದು ಪನ್ನೀರ್ ಸೆಲ್ವಂ ಸ್ಮರಿಸಿದರು