ಛಿದ್ರಗೊಂಡಿರುವ ಆಡಳಿತ ವ್ಯವಸ್ಥೆ ಸಾಮೂಹಿಕ ಶಕ್ತಿ ಹಾಗೂ ಸಾಮರ್ಥ್ಯಗಳನ್ನು ಗರಿಷ್ಟ ಮಟ್ಟಕ್ಕೆ ತಲುಪಲು ಬಿಡುವುದಿಲ್ಲ. ಯುವ ಅಧಿಕಾರಿಗಳು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಬೇಕು. ಇದರಿಂದ ಹೊಸ ಶಕ್ತಿ ಹಾಗೂ ಹೊಸ ಕಲ್ಪನೆ, ಆಲೋಚನೆಗಳು ವ್ಯವಸ್ಥೆಗೆ ಬದಲಾವಣೆಯಾಗಲು ಸಹಕಾರಿಯಾಗಲಿದೆ. ಯುಪಿಎಸ್ ಫಲಿತಾಂಶದ ವರೆಗೂ ನೀವು ಪಟ್ಟ ಪರಿಶ್ರಮವನ್ನು ಸವಾಲುಗಳನ್ನು, ಅವಕಾಶಗಳೊಂದಿಗೆ ನೀವು ಹೇಗೆ ಬೆಳೆದು ಬಂದಿರಿ ಎಂಬುದನ್ನು ನೆನಪಿಸಿಕೊಳ್ಳಿರಿ ಎಂದು ತಿಳಿಸಿದ್ದಾರೆ.