ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೋರ್ವ ಮಹಾತ್ಮ ಗಾಂಧೀಜಿ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ಬಣ್ಣಿಸಿದ್ದಾರೆ.
ಈ ಕುರಿತಂತೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ರಾಷ್ಟ್ರಪಿತರಾಗಿ ಹಲವು ಪೀಳಿಗೆಗಳಿಗೆ ಪ್ರೇರಣೆಯಾಗಿದ್ದ ಮಹಾತ್ಮ ಗಾಂಧೀಜಿಯವರಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಮತ್ತೋರ್ವ ಮಹಾತ್ಮ ಗಾಂಧೀಜಿಯಾಗಿದ್ದಾರೆಂದು ಹೇಳಿದ್ದಾರೆ.
ಸ್ಫೂರ್ತಿದಾಯಕರಾಗಿರುವ ನಮ್ಮ ಪ್ರಧಾನಿಯವರ ರೂಪದಲ್ಲಿ ಮತ್ತೋರ್ವ ಗಾಂಧೀಜಿಯನ್ನು ಪಡೆಯಲು ನಾವು ಇಂದು ಅದೃಷ್ಟ ಮಾಡಿದ್ದೇವೆ.
ಗಾಂಧೀಯವರ ಕನಸನ್ನು ನನಸು ಮಾಡಬೇಕೆಂಬು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಾಗಿದೆ. ಮೋದಿಯವರ ಕನಸು ಹಾಗೂ ಅವರ ಅಲೋಚನೆಗಳನ್ನು ಇಡೀ ವಿಶ್ವಕ್ಕೆ ಪಸರಿಸಲು ಸಂಸ್ಕೃತಿ ಸಚಿವಾಲಯ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.