ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ರಹಸ್ಯವನ್ನು ತಿಳಿಯಲು ಭಾರತ ಸರ್ಕಾರ ಮೂರು ಆಯೋಗಗಳನ್ನು ರಚಿಸಿತ್ತು, ಈ ಪೈಕಿ 1956 ರ ಷಾ ನವಾಜ್ ಸಮಿತಿ ಹಾಗೂ 1970 ರ ಖೋಸ್ಲಾ ಸಮಿತಿ ನೇತಾಜಿ 1945 ರ ಆಗಸ್ಟ್ 18 ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ 1999 ರ ಮುಖರ್ಜಿ ಆಯೋಗ ಮಾತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತರಾಗಲಿಲ್ಲ ಎಂದು ಹೇಳಿತ್ತು. ಈ ವರದಿಯನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಫ್ರೆಂಚ್ ರಹಸ್ಯ ವರದಿಯೊಂದು ಬಹಿರಂಗಗೊಂಡಿದ್ದು, ನೇತಾಜಿ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಲಿಲ್ಲ ಎಂದು ಹೇಳಿದೆ.