ನಾನು ಕಚೇರಿಯಲ್ಲಿ ಒಬ್ಬನೇ ಇದ್ದಾಗ ಇಂದ್ರಾಣಿ ಮೇಡಂ ಸ್ಕೈಪ್ ಮೂಲಕ, ನೀನು ತುಂಬಾ ವಿಶ್ವಾಸದ ವ್ಯಕ್ತಿಯಾಗಿದ್ದು, ನಿನಗೆ ಒಂದು ವಿಚಾರ ಹೇಳುತ್ತೇನೆ. ಅದನ್ನು ಯಾರಿಗೂ ಹೇಳಬೇಡ. ನಿನ್ನ ಮಕ್ಕಳ ಶಿಕ್ಷಣದ ಮತ್ತು ವೈದ್ಯಕೀಯ ವೆಚ್ಚದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ನನ್ನ ಚಾಲಕನ ಹುದ್ದೆಯನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಶೀನಾ ಮತ್ತು ಮಿಖೈಲ್ ನನ್ನನ್ನು ಎಲ್ಲಾ ಕಡೆ ತಾಯಿ ಎಂದು ಕರೆಯುವ ಮೂಲಕ ಅವಮಾನಿಸುತ್ತಿದ್ದಾರೆ. ಅಲ್ಲದೆ ಪೀಟರ್ ಮುಖರ್ಜಿಯ ಪುತ್ರ ರಾಹುಲ್ ಶೀನಾಳನ್ನು ಪ್ರೀತಿಸುತ್ತಿದ್ದಾವೆ. ಹೀಗಾಗಿ ನಾನು ಶೀನಾ ಬೋರಾ ಮತ್ತು ಮಿಖೈಲ್ ಇಬ್ಬರನ್ನು ಕೊಲೆ ಮಾಡುತ್ತೇನೆ ಎಂದು ಹೇಳಿರುವುದಾಗಿ ರೈ ಇಂದು ಕೋರ್ಟ್ ಗೆ ತಿಳಿಸಿದ್ದಾನೆ.