ಇಂದ್ರಾಣಿ ಮುಖರ್ಜಿ ಶೀನಾ, ಮಿಖೈಲ್ ಕೊಲೆ ಮಾಡುವುದಾಗಿ ಹೇಳಿದ್ದರು: ಕೋರ್ಟ್ ನಲ್ಲಿ ಚಾಲಕ ರೈ ತಪ್ಪೊಪ್ಪಿಗೆ

ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಚಾಲಕ ಶ್ಯಾಮವರ್‌ ರೈ,....
ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ
ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಚಾಲಕ ಶ್ಯಾಮವರ್‌ ರೈ, ಇಂದ್ರಾಣಿ ಮುಖರ್ಜಿ ಶೀನಾ ಬೋರಾ ಮತ್ತು ಆಕೆಯ ಮಲಮಗ ಮಿಖೈಲ್ ಇಬ್ಬರನ್ನು ಕೊಲೆ ಮಾಡುವುದಾಗಿ ನನಗೆ ಹೇಳಿದ್ದರು ಎಂದು ಶುಕ್ರವಾರ ಕೋರ್ಟ್ ನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ನಾನು ಕಚೇರಿಯಲ್ಲಿ ಒಬ್ಬನೇ ಇದ್ದಾಗ ಇಂದ್ರಾಣಿ ಮೇಡಂ ಸ್ಕೈಪ್ ಮೂಲಕ, ನೀನು ತುಂಬಾ ವಿಶ್ವಾಸದ ವ್ಯಕ್ತಿಯಾಗಿದ್ದು, ನಿನಗೆ ಒಂದು ವಿಚಾರ ಹೇಳುತ್ತೇನೆ. ಅದನ್ನು ಯಾರಿಗೂ ಹೇಳಬೇಡ. ನಿನ್ನ ಮಕ್ಕಳ ಶಿಕ್ಷಣದ ಮತ್ತು ವೈದ್ಯಕೀಯ ವೆಚ್ಚದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ನನ್ನ ಚಾಲಕನ ಹುದ್ದೆಯನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಶೀನಾ ಮತ್ತು ಮಿಖೈಲ್ ನನ್ನನ್ನು ಎಲ್ಲಾ ಕಡೆ ತಾಯಿ ಎಂದು ಕರೆಯುವ ಮೂಲಕ ಅವಮಾನಿಸುತ್ತಿದ್ದಾರೆ. ಅಲ್ಲದೆ ಪೀಟರ್ ಮುಖರ್ಜಿಯ ಪುತ್ರ ರಾಹುಲ್ ಶೀನಾಳನ್ನು ಪ್ರೀತಿಸುತ್ತಿದ್ದಾವೆ. ಹೀಗಾಗಿ ನಾನು ಶೀನಾ ಬೋರಾ ಮತ್ತು ಮಿಖೈಲ್ ಇಬ್ಬರನ್ನು ಕೊಲೆ ಮಾಡುತ್ತೇನೆ ಎಂದು ಹೇಳಿರುವುದಾಗಿ ರೈ ಇಂದು ಕೋರ್ಟ್ ಗೆ ತಿಳಿಸಿದ್ದಾನೆ.
ಶೀನಾ ಹಾಗೂ ಮಿಖೈಲಿ ಕೊಲೆ ಮಾಡುವುದಕ್ಕಾಗಿ ಓರ್ವ ವ್ಯಕ್ತಿ ಕೊಲ್ಕತಾದಿಂದ ಬರುತ್ತಿದ್ದಾರೆ ಎಂದು ಸಹ ಇಂದ್ರಾಣಿ ತನಗೆ ತಿಳಿಸಿದ್ದರು ಎಂದು ರೈ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾನೆ. ಅಲ್ಲದೆ ಕೊಲೆಗೆ ಸಹಾಯ ಮಾಡಲು ತನಗೆ ಇಂದ್ರಾಣಿ ಹಣ ನೀಡಿರುವುದಾಗಿ ತಿಳಿಸಿದ್ದಾನೆ.
ನಾನು, ಇಂದ್ರಾಣಿ ಹಾಗೂ ಅಕೆಯ ಪತಿ ಸಂಜೀವ್ ಖನ್ನಾ ಮೂವರು ಸೇರಿ ಶೀನಾ ಬೋರಾ ದೇಹವನ್ನು ರಾಯ್ ಗಡ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುಟ್ಟು ಹಾಕಿರುವುದಾಗಿ ರೈ ತಪ್ಪೊಪ್ಪಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com