ಭಾರತೀಯರ ನಾಪತ್ತೆ ಪ್ರಕರಣ ಕುರಿತಂತೆ ಸಿರಿಯಾ ಗುಪ್ತಚರ ಇಲಾಖೆಯ ಮುಖ್ಯಸ್ಥರು ಸೇರಿದಂತೆ ಹಲವಾರು ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಭಾರತದ ಅಧಿಕಾರಿಗಳು ಹಲವು ಬಾರಿ ಸಿರಿಯಾ ಹಾಗೂ ಇರಾಕ್'ಗೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಭಾರತೀಯ ಕುರಿತಂತೆ ಮಾಹಿತಿ ಕೇಳಿದ್ದಾರೆ. ನಾಪತ್ತೆಯಾಗಿರುವ ಭಾರತೀಯರು ಪತ್ತೆಯಾಗಿದ್ದೇ ಆದಲ್ಲಿ ಅವರನ್ನು ಅವರ ತಾಯಿನಾಡಿಗೆ ಕಳುಹಿಸುತ್ತೇವೆಂದು ಹೇಳಿದ್ದಾರೆ.